ಸಬರ್ಬನ್ ರೈಲು ಉದ್ಘಾಟನೆಗೆ ಕ್ಷಣಗಣನೆ ಆರಂಭ

Published : Aug 18, 2017, 08:48 AM ISTUpdated : Apr 11, 2018, 12:45 PM IST
ಸಬರ್ಬನ್ ರೈಲು ಉದ್ಘಾಟನೆಗೆ ಕ್ಷಣಗಣನೆ ಆರಂಭ

ಸಾರಾಂಶ

ವೈಟ್‌'ಫೀಲ್ಡ್‌'ನಿಂದ ಸಾಕಷ್ಟು ಪ್ರಯಾಣಿಕರು ಡೆಮು ಬಳಸಿ ಬೈಯ್ಯಪ್ಪನಹಳ್ಳಿ ತಲುಪಿದಲ್ಲಿ ಅಲ್ಲಿಂದ ಮೆಟ್ರೋ ಮೂಲಕ ಬೆಂಗಳೂರು ನಗರದ ವಿವಿಧ ಭಾಗಗಳನ್ನು ತಲುಪಲು ಅವಕಾಶವಾಗಲಿದೆ.

ಬೆಂಗಳೂರು(ಆ.18): ಬೆಂಗಳೂರು ಉಪನಗರ ರೈಲು (ಸಬ್ ಅರ್ಬನ್ ರೈಲು) ಯೋಜನೆಯ ಮೊದಲ ಹೆಜ್ಜೆ ಎಂಬಂತೆ ಇಂದಿನಿಂದ ಬೈಯ್ಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ ನಡುವೆ ಡೆಮು ರೈಲು ಸಂಚಾರ ಆರಂ‘ಗೊಳ್ಳಲಿದೆ. ರೈಲ್ವೆ ಸಚಿವ ಸುರೇಶ್‌ಪ್ರಭು ವಿಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿಯಿಂದಲೇ ಡೆಮು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಆದರೆ ಡೆಮು ರೈಲು ಬೆಳಗ್ಗೆ ಮತ್ತು ಸಂಜೆ ಒಂದೇ ಬಾರಿ ಸಂಚರಿಸುತ್ತಿರುವುದು ಈ ಭಾಗದ ರೈಲ್ವೇ ಪ್ರಯಾಣಿಕರಲ್ಲಿ ಸಾಕಷ್ಟು ನಿರಾಶೆಗೆ ಕಾರಣವಾಗಿದೆ.

ಬೆಂಗಳೂರು ನಗರದ ಬಹುಪಾಲು ಐಟಿ-ಬಿಟಿ ಕಂಪನಿಗಳನ್ನು ಹೊಂದಿರುವ ಇಲೆಕ್ಟ್ರಾನಿಕ್ ಸಿಟಿ-ವೈಟ್‌'ಫೀಲ್ಡ್ ಮೊದಲಾದ ಭಾಗದಲ್ಲಿ ಸಂಚಾರ ದಟ್ಟಣೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ಇದೀಗ ನಮ್ಮ ಮೆಟ್ರೋ ಕಾಮಗಾರಿ ಕೂಡ (ಬೈಯ್ಯಪ್ಪನಹಳ್ಳಿ-ವೈಟ್ ಫೀಲ್ಡ್) ಈ ಭಾಗದಲ್ಲಿ ಆರಂಭಗೊಂಡಿದ್ದು, ಇಲ್ಲಿನ ರಸ್ತೆ ಪ್ರಯಾಣವನ್ನು ಇನ್ನಷ್ಟು ದುಸ್ತರವಾಗಿಸಿದೆ. ಹೀಗಾಗಿ ಹೊಸದಾಗಿ ಡೆಮು ಸಂಚಾರಕ್ಕೆ ಚಾಲನೆ ನೀಡಲಾಗುತ್ತಿದ್ದರೂ ಡೆಮು ರೈಲು ಬೆಳಗ್ಗೆ ಮತ್ತು ಸಂಜೆ ಒಂದೇ ಬಾರಿ ಸಂಚರಿಸುತ್ತಿರುವುದರಿಂದ ಜನರು ಭ್ರಮನಿರಸನಗೊಂಡಿದ್ದಾರೆ. ಇನ್ನೂ ಹೆಚ್ಚು ಬಾರಿ ಡೆಮು ಸೇವೆ ಒದಗಿಸಬಹುದಾಗಿದ್ದರೂ ಕೂಡ ಕೇವಲ ಒಂದೇ ಟ್ರೀಪ್‌'ಗೆ ಸೀಮಿತಗೊಳಿಸಿರುವುದನ್ನು ಆಕ್ಷೇಪಿಸಿದ್ದಾರೆ.

ದಿನಕ್ಕೊಂದೇ ಬಾರಿ: ಬೈಯ್ಯಪ್ಪನಹಳ್ಳಿ ಮತ್ತು ವೈಟ್‌'ಫೀಲ್ಡ್ ನಡುವೆ ಡೆಮು ರೈಲು ಬೆಳಗ್ಗೆ 8.25 ಮತ್ತು ಸಂಜೆ 6.15ಕ್ಕೆ ಮಾತ್ರ ಸಂಚಾರ ನಡೆಸಲಿದೆ. ಬೆಳಗ್ಗೆ 8.25ಕ್ಕೆ ಬೈಯ್ಯಪ್ಪನಹಳ್ಳಿಯಿಂದ ಹೊರಡುವ ರೈಲು 8.50ಕ್ಕೆ ವೈಟ್‌ಫೀಲ್ಡ್ ತಲುಪಲಿದೆ. ಸಂಜೆ 6.15ಕ್ಕೆ ವೈಟ್‌ಫೀಲ್ಡ್ ಬಿಡುವ ಇದೇ ರೈಲು 6.40ಕ್ಕೆ ಬೈಯ್ಯಪ್ಪನಹಳ್ಳಿ ತಲುಪಲಿದೆ. ಆದರೆ ಈ ರೈಲು ದಿನವಿಡೀ ವೈಟ್‌'ಫೀಲ್ಡ್‌'ನಲ್ಲಿ ರೈಲು ನಿಲುಗಡೆ ಆಗಲಿದ್ದು, ಈ ಅವಧಿಯಲ್ಲಿ ಸಂಚಾರ ನಡೆಸಿದರೆ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವೈಟ್‌'ಫೀಲ್ಡ್‌'ನಿಂದ ಸಾಕಷ್ಟು ಪ್ರಯಾಣಿಕರು ಡೆಮು ಬಳಸಿ ಬೈಯ್ಯಪ್ಪನಹಳ್ಳಿ ತಲುಪಿದಲ್ಲಿ ಅಲ್ಲಿಂದ ಮೆಟ್ರೋ ಮೂಲಕ ಬೆಂಗಳೂರು ನಗರದ ವಿವಿಧ ಭಾಗಗಳನ್ನು ತಲುಪಲು ಅವಕಾಶವಾಗಲಿದೆ. ಬೈಯ್ಯಪ್ಪನಹಳ್ಳಿ- ವೈಟ್ ಫೀಲ್ಡ್ ನಡುವಿನ ಸಂಚಾರಕ್ಕೆ ನಿಗದಿ ಮಾಡಲಾಗಿದ್ದು, ಮಾಸಿಕ ಪಾಸ್ ದರ 175 ಇದೆ. ಮಾಸಿಕ ಪಾಸ್ ಖರೀದಿಸಿ ದಿನದಲ್ಲಿ ಎಷ್ಟು ಬಾರಿ ಆದರೂ ಪ್ರಯಾಣಿಸುವ ಅವಕಾಶವಿದ್ದು ವೈಟ್‌'ಫೀಲ್ಡ್‌ನಿಂದ ಬರುವ ಸಾವಿರಾರು ಪ್ರಯಾಣಿಕರು ಇದರ ಲಾಭ ಪಡೆಯಬಹುದಾಗಿದೆ. ಕೃಷ್ಣರಾಜಪುರಂ (ಕೆ. ಆರ್.ಪುರ) ಮತ್ತು ಹೂಡಿ ಎರಡೂ ನಿಲ್ದಾಣಗಳಲ್ಲಿ ಡೆಮು ರೈಲು ನಿಲುಗಡೆ ಇದೆ.

ಮೆಟ್ರೋ ಮೇಲೆ ಒತ್ತಡ: ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣ ಮತ್ತು ವೆುಟ್ರೋ ನಿಲ್ದಾಣಗಳು ಹತ್ತಿರದಲ್ಲೇ ಇರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಡೆಮು ರೈಲಿನಲ್ಲಿ ಒಟ್ಟು 2412(ಸ್ಟಾಂಡಿಂಗ್ ಮತ್ತು ಸಿಟ್ಟಿಂಗ್) ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಡೆಮುನಲ್ಲಿ ಬರುವ ಅರ್ಧದಷ್ಟು ಪ್ರಯಾಣಿಕರು ಬೆಂಗಳೂರು ನಗರದ ಕಡೆಗೆ ಪ್ರಯಾಣಿಸಲು ಮೆಟ್ರೋ ಬಳಕೆ ಮಾಡಿದರೆ ಬೈಯ್ಯಪ್ಪನಹಳ್ಳಿ ನಂತರ ಬರುವ ನಿಲ್ದಾಣಗಳಲ್ಲಿ ಕಾದಿರುವ ಮೆಟ್ರೋ ಪ್ರಯಾಣಿಕರು ರೈಲು ಹತ್ತಲೂ ಅಸಾಧ್ಯವೆನಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಡೆಮು ರೈಲು ಬೆಳಗ್ಗೆ ಬೈಯ್ಯಪ್ಪನಹಳ್ಳಿ ಬಿಡುವ ಮತ್ತು ಸಂಜೆ ಬೈಯ್ಯಪ್ಪನಹಳ್ಳಿ ತಲುಪುವ ಸಮಯದಲ್ಲಿ ಮೆಟ್ರೋ ರೈಲುಗಳ ಸಂಚಾರದ ನಡುವಿನ ಅಂತರವನ್ನು ಕಡಿಮೆಗೊಳಿಸುವುದು ಅನಿವಾರ್ಯವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

11 ನಿಮಿಷ ಉಸಿರು ಚೆಲ್ಲಿ ಬದುಕಿದ ಮಹಿಳೆ: ಸ್ವರ್ಗ- ನರಕದ ನಂಬಲಾಗದ ಅನುಭವ ಬಿಚ್ಚಿಟ್ಟಿದ್ದು ಹೀಗೆ
DRDO ನೇಮಕಾತಿ, ಬರೋಬ್ಬರಿ 764 ತಾಂತ್ರಿಕ ಸಹಾಯಕ, ತಂತ್ರಜ್ಞ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ