ಶೂಟೌಟ್ ಪ್ರಕರಣ: ಸಚಿವರ ಸೋದರನಿಗೆ ಜಾಮೀನು ರಹಿತ ವಾರೆಂಟ್

Published : Jul 21, 2017, 07:46 PM ISTUpdated : Apr 11, 2018, 01:02 PM IST
ಶೂಟೌಟ್ ಪ್ರಕರಣ: ಸಚಿವರ ಸೋದರನಿಗೆ ಜಾಮೀನು ರಹಿತ ವಾರೆಂಟ್

ಸಾರಾಂಶ

ವಿಜಯ ಕುಲಕರ್ಣಿ ಸೇರಿ ಮೂವರು ಮೇಲೆ ಕೊಲೆ ಯತ್ನ , ಸಂಚು ಹಾಗೂ ಶೂಟೌಟ್ ಪ್ರಕರಣ ದಾಖಲಿಸಿವಂತೆ ಹುಬ್ಬಳ್ಳಿ ಎರಡನೇ ಜೆ.ಎಂ.ಎಫ್.ಸಿ ಕೋರ್ಟ್ ಆದೇಶಿಸಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.  

ಹುಬ್ಬಳ್ಳಿ(ಜು.21): ಕಿಮ್ಸ್ ಆಸ್ಪತ್ರೆಯ ವೈದ್ಯ ಶಿವಾನಂದ ದೊಡ್ಡಮನಿ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಸಹೋದರ ಹಾಗೂ ಕಾಂಗ್ರೆಸ್ ಮುಖಂಡ ವಿಜಯ ಕುಲಕರ್ಣಿ ಸೇರಿದಂತೆ ಮೂರುವ ಆರೋಪಿ ಗಳ ವಿರುದ್ಧ ಹುಬ್ಬಳ್ಳಿ ಕೋರ್ಟ್ ಜಾಮೀನು ವಾರೆಂಟ್ ಜಾರಿ ಮಾಡಿದೆ.

ಇದರೊಂದಿಗೆ ಉತ್ತರ ಕರ್ನಾಟಕವನ್ನೇ ಬೆಚ್ಚಿಬಿಳಿಸಿದ್ದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ವೈದ್ಯ ಡಾ.ಶಿವಾನಂದ ದೊಡ್ಡಮನಿ ಶೂಟೌಟ್ ಪ್ರಕರಣಕ್ಕೆ ಮರುಜೀವ ಬಂದಿದೆ. ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ವಿಜಯ ಕುಲಕರ್ಣಿ ಸೇರಿ ಮೂವರು ಮೇಲೆ ಕೊಲೆ ಯತ್ನ , ಸಂಚು ಹಾಗೂ ಶೂಟೌಟ್ ಪ್ರಕರಣ ದಾಖಲಿಸಿವಂತೆ ಹುಬ್ಬಳ್ಳಿ ಎರಡನೇ ಜೆ.ಎಂ.ಎಫ್.ಸಿ ಕೋರ್ಟ್ ಆದೇಶಿಸಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.  ಕಿಮ್ಸ್ ನ ಹಿಂದಿನ ನಿರ್ದೇಶಕ ಡಾ.ಎಂಜಿ ಹಿರೇಮಠ, ವಿಶ್ವಪ್ರಕಾಶ್ ಉಳ್ಳಾಗಡ್ಡಿ ಮಠ ಹಾಗೂ ಸಚಿವರ ಸಹೋದರ ವಿಜಯ್ ಕುಲಕರ್ಣಿ ಮೇಲೆ ಐಪಿಸಿ ಸೆಕ್ಷನ್ 307, 120(ಬಿ)ಹಾಗೂ 114 ಅಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದೆ. ಈ ಮೂರು ಜನ ಆರೋಪಿತರ ಪೈಕಿ ವಿಶ್ವಪ್ರಕಾಶ್ ಉಳ್ಳಾಗಡ್ಡಿಮಠ ಮೂರು ವರ್ಷದ ಹಿಂದೆಯೇ ಮೃತಪಟ್ಟಿದ್ದು, ಗಣ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಹಾಗೂ ಡಾ.ಎಂ.ಜಿ. ಹಿರೇಮಠ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಟಲ್ ಅರೆಸ್ಟ್‌ಗೆ ಹೆದರಿ ಕೋಟಿಗಟ್ಟಲೆ ಬೆಲೆಬಾಳುವ ಸೈಟ್, ಮನೆ ಮಠ ಮಾರಿದ ಬೆಂಗಳೂರು ಮಹಿಳಾ ಟೆಕ್ಕಿ!
ಮೂಡಿಗೆರೆ: ಮನೆ ಭೋಗ್ಯ ವಿಚಾರಕ್ಕೆ ಜಗಳ, ಮಹಿಳೆಯ ಜಡೆ ಹಿಡಿದು ಎಳೆದು ಬಿಸಾಡಿ ಹಲ್ಲೆ.!