ಹವಾಯಿ ಜಹಾಝ್’ನಲ್ಲಿ ಹವಾಯಿ ಚಪ್ಪಲಿ ನೋಡುವ ಆಸೆ: ಪ್ರಧಾನಿ ಮೋದಿ

Published : Apr 27, 2017, 11:24 AM ISTUpdated : Apr 11, 2018, 12:41 PM IST
ಹವಾಯಿ ಜಹಾಝ್’ನಲ್ಲಿ ಹವಾಯಿ ಚಪ್ಪಲಿ ನೋಡುವ ಆಸೆ: ಪ್ರಧಾನಿ ಮೋದಿ

ಸಾರಾಂಶ

ಸಣ್ಣ-ನಗರಗಳ ಜನಸಾಮಾನ್ಯರ ಕೈಗೆಟಕುವ ದರದಲ್ಲಿ ವಾಯುಯಾನ ಸಂಪರ್ಕವನ್ನು ಆರಂಭಿಸುವ ಉಡಾನ್ ಯೋಜನೆ ಭಾಗವಾಗಿ ಇಂದು ಶಿಮ್ಲಾ-ದೆಹಲಿ ಸಂಪರ್ಕ ಕಲ್ಪಿಸುವ 3 ಉಡಾನ್ ವಿಮಾನಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಶಿಮ್ಲಾ (ಏ.27): ಉಡಾನ್ ವಿಮಾನಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ,  ನಾನು ಹವಾಯಿ ಜಹಾಝ್’ನಲ್ಲಿ (ವಿಮಾನ) ಹವಾಯಿ ಚಪ್ಪಲಿಗಳನ್ನು ನೋಡಬಯಸುತ್ತೇನೆ ಎಂದಿದ್ದಾರೆ.

ಸಣ್ಣ-ನಗರಗಳ ಜನಸಾಮಾನ್ಯರ ಕೈಗೆಟಕುವ ದರದಲ್ಲಿ ವಾಯುಯಾನ ಸಂಪರ್ಕವನ್ನು ಆರಂಭಿಸುವ ಉಡಾನ್ ಯೋಜನೆ ಭಾಗವಾಗಿ ಇಂದು ಶಿಮ್ಲಾ-ದೆಹಲಿ ಸಂಪರ್ಕ ಕಲ್ಪಿಸುವ 3 ಉಡಾನ್ ವಿಮಾನಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಸರ್ಕಾರದ ವಿವಿಧ ಯೋಜನೆಗಳ ಮೇಲೆ ಬೆಳಕು ಚಿಲ್ಲಿದ ಪ್ರಧಾನಿ,  ಬಡವರಿಗೆ ಪ್ರಯೋಜನವಾಗುವಂತಲು ಸರ್ಕಾರವು ಸ್ಟೆಂಟ್ ದರಗಳನ್ನು ಇಳಿಸಿದೆ, ಎಂದಿದ್ದಾರೆ.

ನಮ್ಮ ಯುವಕರಿಗೆ ಉದ್ಯೋಗ ಸಿಗಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಹಾಗೂ ಹಿರಿಯರಿಗೆ ಆರೋಗ್ಯಸೇವೆಗಳು ಲಭ್ಯವಾಗಬೇಕು ಎಂದಿರುವ ಪ್ರಧಾನಿ ಮೋದಿ, ಉಜ್ವಲ ಯೋಜನೆಯಿಂದ ಗ್ರಾಮೀಣ ಪ್ರದೇಶಕ್ಕೆ ಭಾರೀ ಪ್ರಯೋಜನವಾಗಿದೆ ಎಂದು ಹೇಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗಳ ಬಗ್ಗೆ ಮಾತನಾಡಿದ ಪ್ರಧಾನಿ, ಉತ್ತರಪ್ರದೇಶ, ಉತ್ತರಾಖಂಡ ಹಾಗೂ ದೆಹಲಿಯ ಕಡೆಯಿಂದ ಈಗ ಅಲೆಯು ಹಿಮಾಚಲ ಪ್ರದೇಶದತ್ತ ಸಾಗಲಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ವಿದರ್ಭ ಸಿಂಗ್’ರನ್ನು ಟೀಕಿಸಿದ ಪ್ರಧಾನಿ ಮೋದಿ,  ವಿಧರ್ಬ ಸಿಂಗ್ ವಕೀಲರೊಂದಿಗೆ ಕಳೆದಿರುವಷ್ಟು ಸಮಯ ದೇಶದ ಯಾವುದೇ ಮುಖ್ಯಮಂತ್ರಿಯು ವ್ಯಯಿಸಿರಲಾರರು ಎಂದು ಹೇಳಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂತ್ರಾಲಯದ ಮಡಿಲಲ್ಲಿ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ: ರಾಯರ ದರ್ಶನ ಪಡೆದು ಧನ್ಯತೆ ಅನುಭವಿಸಿದ ಕಾಂತಾರ ನಟ!
ವೀರಪ್ಪನ್‌ಗಿಂತ, ಸಿದ್ದರಾಮಯ್ಯ ಕಾಲದಲ್ಲೇ ಆನೆ ಸಾವು ಜಾಸ್ತಿ.! ಅಂಕಿ-ಅಂಶ ಬಚ್ಚಿಟ್ಟ ಆರ್. ಅಶೋಕ್