
ನವದೆಹಲಿ(ಜು.15): ವಂಚನೆ ಕೇಸಲ್ಲಿ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಿದರೆ ಅವರನ್ನು ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಅತ್ಯಧಿಕ ಬಿಗಿ ಭದ್ರತೆಯ 12ನೇ ಬಾರಕ್ನಲ್ಲಿ ಉದ್ಯಮಿಯನ್ನು ಬಂಧಿಸಿಡುವುದಾಗಿ ಬ್ರಿಟನ್ ಸರ್ಕಾರಕ್ಕೆ ಮಾಹಿತಿ ನೀಡಿದೆ. ಯಾವುದೇ ವ್ಯಕ್ತಿಯನ್ನು ಬೇರೆ ದೇಶಕ್ಕೆ ಗಡೀಪಾರು ಮಾಡುವ ಮುನ್ನ ಆ ದೇಶದಲ್ಲಿನ ಜೈಲಿನ ಸ್ಥಿತಿಗಳ ಬಗ್ಗೆ ಹೆಚ್ಚಿನ ಮುತುವರ್ಜಿಯನ್ನು ಬ್ರಿಟನ್ ತೆಗೆದುಕೊಳ್ಳುತ್ತದೆ. ಅದರಂತೆ, ಮಲ್ಯ ಅವರ ಬಗ್ಗೆ ಬ್ರಿಟನ್ ಸರ್ಕಾರ ಕೇಳಿದ ಪ್ರಶ್ನೆಗೆ ಭಾರತ ಸರ್ಕಾರ ಮೇಲ್ಕಂಡ ಉತ್ತರ ನೀಡಿದೆ.
ಮಲ್ಯ ಹಾಜರಾದ ಮೇಲಷ್ಟೇ ತೀರ್ಪು: ಈ ನಡುವೆ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಮಲ್ಯಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಸ್ಥಗಿತಗೊಳಿಸಿದೆ. ಮಲ್ಯ ಅವರ ಅನುಪಸ್ಥಿತಿಯಲ್ಲಿ ಅವರಿಗೆ ಶಿಕ್ಷೆ ವಿಧಿಸಲು ಆಗದು. ಮಲ್ಯ ಖುದ್ದು ಹಾಜರಾದ ಮೇಲಷ್ಟೇ ಈ ಕೇಸಲ್ಲಿ ಮುಂದುವರೆಯಬಹುದು ಎಂದು ನ್ಯಾಯಪೀಠ ಹೇಳಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.