ನೌಕಾಪಡೆ ಮುಖ್ಯಸ್ಥರ ನೇಮಕ ವಿವಾದ: ಕೋರ್ಟ್ ಕದ ತಟ್ಟಿದ ಅಧಿಕಾರಿ!

Published : Apr 08, 2019, 05:21 PM IST
ನೌಕಾಪಡೆ ಮುಖ್ಯಸ್ಥರ ನೇಮಕ ವಿವಾದ: ಕೋರ್ಟ್ ಕದ ತಟ್ಟಿದ ಅಧಿಕಾರಿ!

ಸಾರಾಂಶ

ಮೋದಿ ಸರ್ಕಾರದ ವಿರುದ್ಧ ಸೇವಾ ಹಿರಿತನ ಕಡೆಗಣಿಸಿದ ಆರೋಪ| ವಿವಾದಕ್ಕೆ ಕಾರಣವಾದ ನೌಕಾಪಡೆ ಮುಖ್ಯಸ್ಥರ ನೇಮಕ| ತಮ್ಮ ಸೇವಾ ಹಿರಿತನ ಕಡೆಗಣಿಸಲಾಗಿದೆ ಎಂದು ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಆರೋಪ| ಕರಮ್ ಬೀರ್ ಸಿಂಗ್ ನೇಮಕಕ್ಕೆ ಬಿಮಲ್ ವರ್ಮಾ ವಿರೋಧ| ಸಶಸ್ತ್ರ ಪಡೆಗಳ ಟ್ರಿಬ್ಯೂನಲ್ ಕದ ತಟ್ಟಿದ ಬಿಮಲ್ ವರ್ಮಾ| ಭೂಸೇನಾ ಮುಖ್ಯಸ್ಥರ ನೇಮಕದಲ್ಲೂ ಕೇಳಿ ಬಂದಿದ್ದ ಅಸಮಾಧಾನ| 

ನವದೆಹಲಿ(ಏ.08): ನೌಕಾಪಡೆ ಮುಖ್ಯಸ್ಥರ ನೇಮಕದ ವಿಚಾರದಲ್ಲಿ ಅನ್ಯಾಯವಾಗಿದ್ದು, ತಮ್ಮ ಸೇವಾ ಹಿರಿತನ ಕಡೆಗಣಿಸಿ ತಮಗಿಂತ ಕಿರಿಯರಾದ ಕರಮ್ ಬೀರ್ ಸಿಂಗ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಆರೋಪಿಸಿದ್ದಾರೆ.

ಈ ಕುರಿತು ಸಶಸ್ತ್ರ ಪಡೆಗಳ ಟ್ರಿಬ್ಯೂನಲ್ ಕದ ತಟ್ಟಿರುವ ಬಿಮಲ್ ವರ್ಮಾ, ನೌಕಾಪಡೆ ಮುಖ್ಯಸ್ಥರನ್ನು ನೇಮಿಸುವಾಗ ತಮ್ಮ ಸೇವಾ ಹಿರಿತನವನ್ನು ಕಡೆಗಣಿಸಲಾಗಿದೆ ಎಂದು  ಅಸಮಾಧಾನ ಹೊರಹಾಕಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇಲೆ, ಎರಡನೇ ಬಾರಿ ಸೇವಾ ಹಿರಿತನವನ್ನು ಕಡೆಗಣಿಸಿ ಕಿರಿಯರನ್ನು ಮುಖ್ಯಸ್ಥರನ್ನಾಗಿ ನೇಮಿಸಿದ ಆರೋಪ ಕೇಳಿ ಬಂದಿದೆ.

2016ರಲ್ಲಿ ಲೆ.ಜ. ಪ್ರವೀಣ್ ಭಕ್ಷಿ ಅವರ ಸೇವಾ ಹಿರಿತನವನ್ನು ಕಡೆಗಣಿಸಿ, ಬಿಪಿನ್ ರಾವತ್ ಅವರನ್ನು ಭೂಸೇನಾ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆಗಲೂ ಸರ್ಕಾರದ ವಿರುದ್ಧ ಹಿರಿಯ ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ