96ಕ್ಕೆ ಕಾಲಿಟ್ಟ ಅಚ್ಯುತಾನಂದನ್: ರಾಜಕೀಯ ನಂದನವನದ ಹಿರಿಯ ನೇತಾರ!

Published : Oct 20, 2019, 09:17 PM IST
96ಕ್ಕೆ ಕಾಲಿಟ್ಟ ಅಚ್ಯುತಾನಂದನ್: ರಾಜಕೀಯ ನಂದನವನದ ಹಿರಿಯ ನೇತಾರ!

ಸಾರಾಂಶ

96ನೇ ವಸಂತಕ್ಕೆ ಕಾಲಿಟ್ಟ ಹಿರಿಯ ಸಿಪಿಎಂ ನೇತಾರ ವಿಎಸ್ ಅಚ್ಯುತಾನಂದನ್| ಭಾರತದ ಅತ್ಯಂತ ಹಿರಿಯ ಸಕ್ರೀಯ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಚ್ಯುತಾನಂದನ್| 2006-11ರವರೆಗೆ ಕೇರಳ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅಚ್ಯುತಾನಂದನ್|ಕೇರಳದ ಮಲ್ಲಂಪುಜಾ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿರುವ ಅಚ್ಯುತಾನಂದನ್| ಕೇರಳದ ಆಡಳಿತ ಸುಧಾರಣಾ ಆಯೋಗದ ಸದಸ್ಯ| ಹಿರಿಯ ಮಾರ್ಕ್ಸ್‌ವಾದಿಗೆ ಜನ್ಮದಿನದ ಶುಭ ಕೋರಿದ ರಾಜಕೀಯ ನೇತಾರರು|

ತಿರುವನಂತಪುರಂ(ಅ.20): ಕೇರಳ ಮಾಜಿ ಸಿಎಂ, ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ನೇತಾರ ವಿಎಸ್ ಅಚ್ಯುತಾನಂದನ್ 96ನೇ ವಸಂತಕ್ಕೆ ಕಾಲಿರಿಸಿದ್ದಾರೆ.

ಈ ಮೂಲಕ ಭಾರತದ ರಾಜಕಾರಣದ ಮೊಗಸಾಲೆಯಲ್ಲಿ ಸಕ್ರೀಯರಾಗಿರುವ ಅತ್ಯಂತ ಹಿರಿಯ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಅಚ್ಯುತಾನಂದನ್ ಪಾತ್ರರಾಗಿದ್ದಾರೆ.

ಕೇರಳದ ಮಲ್ಲಂಪುಜಾ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿರುವ ಅಚ್ಯುತಾನಂದನ್, 2006-11ರ ವರೆಗೆ ಕೇರಳದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕೇರಳದ ಆಡಳಿತ ಸುಧಾರಣಾ ಆಯೋಗದ ಸದಸ್ಯರಾಗಿರುವ ಅಚ್ಯುತಾನಂದನ್, ಈ ಇಳಿ ವಯಸ್ಸಿನಲ್ಲೂ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. 

1985ರಿಂದ 2009ರವೆಗೆ ಸಿಪಿಎಂ ಪಾಲಿಟ್‌ ಬ್ಯುರೋ ಸದಸ್ಯರಾಗಿದ್ದ ಅಚ್ಯುತಾನಂದನ್, ಭಾರತದಲ್ಲಿ ಮಾರ್ಕ್ಸ್‌ವಾದಿ ಸಿದ್ಧಾಂತ ಪ್ರಚರುಪಡಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ.

ಇನ್ನು ಅಚ್ಯುತಾನಂದನ್ ಜನ್ಮದಿನದ ಹಿನ್ನೆಲೆಯಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬದಿಗಿರಿಸಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನೇತಾರರು ಹಿರಿಯ ರಾಜಕಾರಣಿಗೆ ಶುಭಾಶಯ ಕೋರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು