
ನವದೆಹಲಿ (ಡಿ.16): ರಾಜ್ಯಸಭೆಯ ಸಭಾಪತಿಯಾಗಿ ಮೊದಲ ದಿನ ಕಲಾಪಕ್ಕೆ ಹಾಜರಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶುಕ್ರವಾರ ಸದನದಲ್ಲಿ ಎರಡು ಹೊಸ ಸಂಪ್ರದಾಯಗಳ ದಾಖಲೆ ಬರೆದರು. ಮೊದಲನೆಯದಾಗಿ, ಸದಸ್ಯರು ತಮ್ಮ ಪೇಪರ್ಗಳನ್ನು ಸಭಾಪತಿ ಪೀಠಕ್ಕೆ ಸಲ್ಲಿಸುವಾಗ, `ನಾನು ಬೇಡುತ್ತಿದ್ದೇನೆ' ಎಂಬ ಪದ ಬಳಕೆ ಕೈಬಿಡುವಂತೆ ಸೂಚಿಸಿ ವಸಾಹತುಶಾಹಿ ಆಡಳಿತ ಸಂಪ್ರದಾಯ ಕೈಬಿಡುವುದಕ್ಕೆ ಚಾಲನೆ ನೀಡಿದರು.
ಮತ್ತೊಂದು, ದಿವಂಗತರಾದ ಗಣ್ಯರಿಗೆ ಶ್ರದ್ಧಾಂಜಲಿ ಟಿಪ್ಪಣಿ ಓದಿ ಹೇಳುವಾಗ ಎದ್ದು ನಿಂತು ಓದಿದರು. ಪೇಪರ್ ಸಲ್ಲಿಸುವಾಗ ಸದಸ್ಯರು `ನಾನು ಬೇಡುತ್ತಿದ್ದೇನೆ' ಎಂಬುದರ ಬದಲು, `ನಾನು ಮೇಜಿನ ಮೇಲೆ ಇಡಲು ಇಚ್ಛಿಸುತ್ತೇನೆ' ಎಂದು ಹೇಳುವಂತೆ ಸಲಹೆ ನೀಡಿದರು. ಆದಾಗ್ಯೂ, ಇದೊಂದು ಆದೇಶ ಅಲ್ಲ, ಸಲಹೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.