ರಾಜಸ್ಥಾನದಲ್ಲೂ ಕಡಿಮೆ ಬೆಲೆಗೆ ಸಿಗಲಿದೆ ಊಟ

Published : Dec 16, 2016, 04:44 PM ISTUpdated : Apr 11, 2018, 12:36 PM IST
ರಾಜಸ್ಥಾನದಲ್ಲೂ ಕಡಿಮೆ ಬೆಲೆಗೆ ಸಿಗಲಿದೆ ಊಟ

ಸಾರಾಂಶ

ಬಡವರಿಗೆ ಉಚಿತವಾಗಿ ಊಟ ಪೂರೈಸಲು ರಾಜೆ ಅವರು ತಮ್ಮದೇ ಬ್ರಾಂಡ್‌'ನ ಕ್ಯಾಂಟೀನ್ ಅನ್ನು ಉದ್ಘಾಟನೆ ಮಾಡಿದ್ದಾರೆ.

ಜೈಪುರ(ಡಿ.16): ಬಡವರಿಗೆ ಕಡಿಮೆ ದರದಲ್ಲಿ ಊಟ ಒದಗಿಸುವ ತಮಿಳುನಾಡು ಮಾದರಿಯ ಅಮ್ಮ ಕ್ಯಾಂಟೀನ್ ರೀತಿಯಲ್ಲಿ ರಾಜಸ್ಥಾನದಲ್ಲೂ ‘ಅನ್ನಪೂರ್ಣ ರಸಾಯ್’ ಅನ್ನು ಸಿಎಂ ವಸುಂದರಾ ರಾಜೆ ಸ್ಥಾಪನೆ ಮಾಡಿದ್ದು, ಇಲ್ಲಿ ₹5ರಿಂದ ₹8ರ ದರಕ್ಕೆ ಊಟ ದೊರೆಯಲಿದೆ.

ಬಡವರಿಗೆ ಉಚಿತವಾಗಿ ಊಟ ಪೂರೈಸಲು ರಾಜೆ ಅವರು ತಮ್ಮದೇ ಬ್ರಾಂಡ್‌'ನ ಕ್ಯಾಂಟೀನ್ ಅನ್ನು ಉದ್ಘಾಟನೆ ಮಾಡಿದ್ದಾರೆ. ‘ಅನ್ನಪೂರ್ಣ ರಸಾಯ್’ನಲ್ಲಿ ದೊರೆಯುವ ಆಹಾರ ಪದಾರ್ಥಗಳು 4 ಪಟ್ಟು ಕಡಿಮೆ ಬೆಲೆಗೆ ದೊರೆಯಲಿದೆ.

'ಅನ್ನಪೂರ್ಣ ರಸಾಯ್' ಎಲ್ಲರಿಗೂ ಆಹಾರ, ಎಲ್ಲರಿಗೂ ಗೌರವ(ಸಬ್'ಕೇಲಿಯೇ ಭೋಜನ್, ಸಬ್'ಕೇಲಿಯೇ ಸಮ್ಮಾನ್) ಎಂಬ ಧ್ಯೇಯವಾಕ್ಯದಡಿ ಈ ಯೋಜನೆ ಕಾರ್ಯನಿರ್ವಹಿಸಲಿದೆ.   

ಈ ಯೋಜನೆ ಜಾರಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ₹4 ಕೋಟಿ ವ್ಯಯ ಮಾಡಬೇಕಿದೆ. ಅಲ್ಲದೆ, ರಾಜ್ಯಾದ್ಯಂತ ಇರುವ ಬಡವರಿಗೆ 200 ವಾಹನಗಳ ಮೂಲಕ ಊಟ ಒದಗಿಸಲು ನಿರ್ಧರಿಸಲಾಗಿದ್ದು, ರಾಜ್ಯ ಸರ್ಕಾರದ ಮೇಲೆ ₹50 ಕೋಟಿ ಹೊರೆ ಬೀಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸದ್ಯ ಕೊಲೆ ಮಾಡಿಲ್ಲ..! ಓಡಿಹೋದ ಮಗಳ ಪ್ರತಿಕೃತಿಯ ಶವಯಾತ್ರೆ ಮಾಡಿ ಅಂತ್ಯಸಂಸ್ಕಾರ ಮಾಡಿದ ಕುಟುಂಬ
ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!