ಈ ಬಾರಿ ಮೈಸೂರು ದಸರಾದ ಉತ್ಸವ ಮೂರ್ತಿಗೆ ಸಿಂಗಾರ ಮಾಡಿದ ಸೀರೆ ನೀಡಿದ್ದು ಯಾರು ಗೊತ್ತಾ?

Published : Oct 01, 2017, 10:16 AM ISTUpdated : Apr 11, 2018, 12:56 PM IST
ಈ ಬಾರಿ ಮೈಸೂರು ದಸರಾದ ಉತ್ಸವ ಮೂರ್ತಿಗೆ ಸಿಂಗಾರ ಮಾಡಿದ ಸೀರೆ ನೀಡಿದ್ದು ಯಾರು ಗೊತ್ತಾ?

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ಇಡುವ ಚಾಮುಂಡೇಶ್ವರಿ ದೇವಿ ಉತ್ಸವಮೂರ್ತಿಯನ್ನು ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರ ಪತ್ನಿ ಪಾರ್ವತಿ ಅವರು ನೀಡಿರುವ ಕೆಂಪು ಬಾರ್ಡರ್ ಇರುವ ನೀಲಿ ಬಣ್ಣದ ಸೀರೆಯಿಂದ ಸಿಂಗರಿಸಲಾಗಿತ್ತು.

ಮೈಸೂರು(ಅ.01): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ಇಡುವ ಚಾಮುಂಡೇಶ್ವರಿ ದೇವಿ ಉತ್ಸವಮೂರ್ತಿಯನ್ನು ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರ ಪತ್ನಿ ಪಾರ್ವತಿ ಅವರು ನೀಡಿರುವ ಕೆಂಪು ಬಾರ್ಡರ್ ಇರುವ ನೀಲಿ ಬಣ್ಣದ ಸೀರೆಯಿಂದ ಸಿಂಗರಿಸಲಾಗಿತ್ತು.

ಸಿದ್ದರಾಮಯ್ಯ ಅವರು ಮುಂದಿನ ಬಾರಿಯೂ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು, ಸಿಎಂ ಆಗಬೇಕು ಎಂಬ ಉದ್ದೇಶದಿಂದ ಪಾರ್ವತಿಯವರು ಈ ಬಾರಿ ಪೂಜೆ ನೆರವೇರಿಸಿದ್ದಲ್ಲದೇ ಉತ್ಸವಮೂರ್ತಿಗೆ ಸೀರೆ ಕಾಣಿಕೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಬಳೇಪೇಟೆಯ ಉದ್ಯಮಿಯೊಬ್ಬರು ಬಹಳ ವರ್ಷಗಳಿಂದ ಉತ್ಸವಮೂರ್ತಿ ಸಿಂಗರಿಸುವ ಸೀರೆಯನ್ನು ಕಾಣಿಕೆಯಾಗಿ ಕೊಡುತ್ತಾ ಬಂದಿದ್ದರು. ಆದರೆ ಚಾಮುಂಡಿಬೆಟ್ಟಕ್ಕೆ ನವರಾತ್ರಿ ಪೂಜೆಗೆ

ಭೇಟಿ ನೀಡಿದ್ದ ಸಿಎಂ ಪತ್ನಿ ಪಾರ್ವತಿ ಅವರು ಈ ಬಾರಿ ನಾನು ಕೊಟ್ಟ ಸೀರೆಯಿಂದಲೇ ಉತ್ಸವಮೂರ್ತಿಯನ್ನು ಸಿಂಗರಿಸಬೇಕು ಎಂದು ಹೇಳಿದ್ದರು. ಈ ವಿಷಯವನ್ನು ಉದ್ಯಮಿ ಗಮನಕ್ಕೆ ತಂದು, ಪಾರ್ವತಿ ಅವರು ನೀಡಿರುವ ಸೀರೆಯಿಂದಲೇ ಸಿಂಗರಿಸಲಾಯಿತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೆಲುವಿನ ವಿಶ್ವಾಸದಲ್ಲಿ ಬೆಟ್ , ಚುನಾವಣೆ ಫಲಿತಾಂಶ ಉಲ್ಟಾ ಬೆನ್ನಲ್ಲೇ ಮೀಸೆ ಬೋಳಿಸಿದ ಮುಖಂಡ
ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!