ಮೋದಿ ಅಧಿಕಾರಕ್ಕೆ ಬಂದ ಮೇಲೆ ಚಂದ್ರಯಾನ 2ಗೆ ಚಾಲನೆ: ನಾಯರ್

Published : Jun 13, 2019, 09:17 AM ISTUpdated : Jul 15, 2019, 12:01 PM IST
ಮೋದಿ ಅಧಿಕಾರಕ್ಕೆ ಬಂದ ಮೇಲೆ ಚಂದ್ರಯಾನ 2ಗೆ ಚಾಲನೆ: ನಾಯರ್

ಸಾರಾಂಶ

ಲೋಕಸಭಾ ಚುನಾವಣಾ ಲಾಭಕ್ಕಾಗಿ ಚಂದ್ರಯಾನ 2 ಮುಂದೂಡಿದ್ದ ಯುಪಿಎ, ಇಸ್ರೋ ಮಾಜಿ ಅಧ್ಯಕ್ಷ ಮಾಧವನ್‌ ನಾಯರ್‌ ಗಂಭೀರ ಆರೋಪ, ಚಂದ್ರಯಾನ -2ರ ಬದಲು ದೊಡ್ಡದಾದ ಮಂಗಳಯಾನಕ್ಕೆ ಸೂಚನೆ

ಹೈದರಾಬಾದ್‌: 2012ರಲ್ಲೇ ನಡೆಯಬೇಕಿದ್ದ ಚಂದ್ರಯಾನ -2 ಉಡ್ಡಯನವನ್ನು ಅಂದಿನ ಯುಪಿಎ ಸರ್ಕಾರವು, ಲೋಕಸಭಾ ಚುನಾವಣಾ ಉದ್ದೇಶಗಳಿಗಾಗಿ ಮುಂದೂಡಿತ್ತು ಎಂದು ಇಸ್ರೋದ ಮಾಜಿ ಅಧ್ಯಕ್ಷ ಮತ್ತು ಚಂದ್ರಯಾನ ಯೋಜನೆಯ ರೂವಾರಿ ಜಿ. ಮಾಧವನ್‌ ನಾಯರ್‌ ಗಂಭೀರ ಆರೋಪಿಸಿದ್ದಾರೆ.

ಚಂದ್ರಯಾನ -1ನ್ನು 2008ರ ಅ.22ರಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿತ್ತು. 2012ರ ಅಂತ್ಯದ ವೇಳೆಗೆ ಚಂದ್ರಯಾನ 2 ಉಡ್ಡಯನಕ್ಕೆ ನಿರ್ಧಾರ ಕೂಡಾ ಮಾಡಲಾಗಿತ್ತು. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿತ್ತು. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಏನಾದರೂ ದೊಡ್ಡ ಸಾಧನೆಯನ್ನು ಜನರ ಮುಂದೆ ಇಡಲು ಬಯಸಿದ್ದ ಅಂದಿನ ಯುಪಿಎ ಸರ್ಕಾರ ಚಂದ್ರಯಾನ 2ರ ಬದಲು ಹೆಚ್ಚು ಗಮನ ಸೆಳೆಯಬಲ್ಲ ಮಂಗಳಯಾನ ನಡೆಸಲು ಸೂಚಿಸಿತ್ತು. ಹೀಗಾಗಿ ಚಂದ್ರಯಾನ 2 ಯೋಜನೆ ಕೈಬಿಟ್ಟು ನಾವು ನಮ್ಮ ಇಡೀ ತಂಡವನ್ನು ಮಂಗಳಯಾನಕ್ಕೆ ನಿಯೋಜಿಸಬೇಕಾಗಿ ಬಂತು.

ನಾಸಾದ ಚಂದ್ರಯಾನಕ್ಕೆ ಜತೆಯಾಗಲಿದೆ ಬೆಂಗಳೂರಿನ ಕಂಪನಿ

ಆದರೆ ಮಂಗಳಯಾನ ನೌಕೆಯನ್ನು ಲೋಕಸಭಾ ಚುನಾವಣೆ ನಡೆಯುವುದಕ್ಕೆ 6 ತಿಂಗಳು ಮೊದಲು ಅಂದರೆ 2013ರ ನವೆಂಬರ್‌ನಲ್ಲಿ ನಡೆಸಲಾಯಿತಾದರೂ, ನೌಕೆಯ ಮಂಗಳನ ಅಂಗಳದಲ್ಲಿ ಇಳಿದಿದ್ದು, 2014ರ ಸೆಪ್ಟೆಂಬರ್‌ನಲ್ಲಿ ಅಂದರೆ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ. ಹೀಗಾಗಿ ಅಂಥ ನಿರ್ಧಾರದಿಂದ ಯುಪಿಎಗೆ ಹೆಚ್ಚಿನ ಲಾಭವೂ ದಕ್ಕಲಿಲ್ಲ ಎಂದು ನಾಯರ್‌ ಹೇಳಿದ್ದಾರೆ.

ಚಂದ್ರಯಾನ2ಗೆ ಮಹೂರ್ತ ಫಿಕ್ಸ್

ಇನ್ನು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಚಂದ್ರಯಾನ 2 ಯೋಜನೆಗೆ ಚಾಲನೆ ನೀಡಿತು ಎಂದು ನಾಯರ್‌ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ನಾಯರ್‌ ಕಳೆದ ಅಕ್ಟೋಬರ್‌ ತಿಂಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!