ಉತ್ತರ ಪ್ರದೇಶದಲ್ಲಿ ಶಾಲೆಯೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಸಿಎಂ ಯೋಗಿ ಆದಿತ್ಯನಾಥ್ ರೀತಿಯಲ್ಲಿ ಹೇರ್ ಕಟ್ ಮಾಡಿಸಿಕೊಂಡು ಬರಬೇಕು ಅಂತ ಶಾಲಾ ಆಡಳಿತ ಮಂಡಳಿ ಖಡಕ್ಕಾಗಿ ಆದೇಶಿಸಿದೆ.
ಉತ್ತರಪ್ರದೇಶ(ಎ.28): ಉತ್ತರ ಪ್ರದೇಶದಲ್ಲಿ ಶಾಲೆಯೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಸಿಎಂ ಯೋಗಿ ಆದಿತ್ಯನಾಥ್ ರೀತಿಯಲ್ಲಿ ಹೇರ್ ಕಟ್ ಮಾಡಿಸಿಕೊಂಡು ಬರಬೇಕು ಅಂತ ಶಾಲಾ ಆಡಳಿತ ಮಂಡಳಿ ಖಡಕ್ಕಾಗಿ ಆದೇಶಿಸಿದೆ.
ಮೀರತ್'ನ CBSE ಸಂಯೋಜಿತ ಋಷಭ್ ಅಕಾಡೆಮಿ ಕೋ ಎಜುಕೇಶನಲ್ ಇಂಗ್ಲಿಷ್ ಮೀಡಿಯಂ ಶಾಲೆಯ ಕೆಲವು ವಿದ್ಯಾರ್ಥಿಗಳಿಗೆ ಸಿಎಂ ಯೋಗಿ ರೀತಿಯಲ್ಲಿ ಹೇರ್ ಕಟ್ ಮಾಡಿಕೊಂಡು ಬruವಂತೆ ಸೂಚಿಸಿದೆ. ಆದರೆ ಕೆಲ ವಿದ್ಯಾರ್ಥಿಗಳು ಹೇರ್ ಕಟ್ ಮಾಡದೇ ಹಾಗೆಯೇ ಶಾಲೆಗೆ ತೆರಳಿದ್ದಾರೆ. ಹೀಗಾಗಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಕ್ಯಾಂಪಸ್'ನಿಂದ ಹೊರಹಾಕಿದೆ.
ಇದಲ್ಲದೇ ಗಡ್ಡ ಬಿಡಕೂಡದು ಮತ್ತು ಲವ್ ಜಿಹಾದ್ಗೆ ಬಲಿಯಾಗಬಾರದು ಎಂದು ವಿದ್ಯಾರ್ಥಿಗಳಿಗೆ ಖಡಕ್ ಆಗಿ ತಿಳಿಸಲಾಗಿದೆ ಎನ್ನಲಾಗ್ತಿದೆ. ಹೀಗಾಗಿ ವಿದ್ಯಾರ್ಥಿಗಳು, ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.