ಡಿಸಿಯನ್ನು ವರ್ಗಾಯಿಸಿ, ಇಲ್ಲದಿದ್ದರೆ ರಾಜೀನಾಮೆ: ಉತ್ತರ ಪ್ರದೇಶ ಸಚಿವನ ‘ಬೆದರಿಕೆ’

Published : Jul 03, 2017, 02:15 PM ISTUpdated : Apr 11, 2018, 12:39 PM IST
ಡಿಸಿಯನ್ನು ವರ್ಗಾಯಿಸಿ, ಇಲ್ಲದಿದ್ದರೆ ರಾಜೀನಾಮೆ: ಉತ್ತರ ಪ್ರದೇಶ ಸಚಿವನ ‘ಬೆದರಿಕೆ’

ಸಾರಾಂಶ

ದುರ್ವರ್ತನೆ ತೋರಿದ ಬಿಜೆಪಿ ಮುಖಂಡರನ್ನು ಕಂಬಿ ಹಿಂದೆ ಹಾಕಿದ ಪೊಲೀಸ್ ಅಧಿಕಾರಿಣಿಗೆ ವರ್ಗಾವಣೆ ಶಿಕ್ಷೆ ನೀಡಿ ಮುಜುಗರಕ್ಕೊಳಗಾದ ಯೋಗಿ ಸರ್ಕಾರಕ್ಕೆ ಇನ್ನೊಂದು ಸವಾಲೆದುರಾಗಿದೆ.

ಲಕ್ನೋ (ಜು.03): ದುರ್ವರ್ತನೆ ತೋರಿದ ಬಿಜೆಪಿ ಮುಖಂಡರನ್ನು ಕಂಬಿ ಹಿಂದೆ ಹಾಕಿದ ಪೊಲೀಸ್ ಅಧಿಕಾರಿಣಿಗೆ ವರ್ಗಾವಣೆ ಶಿಕ್ಷೆ ನೀಡಿ ಮುಜುಗರಕ್ಕೊಳಗಾದ ಯೋಗಿ ಸರ್ಕಾರಕ್ಕೆ ಇನ್ನೊಂದು ಸವಾಲೆದುರಾಗಿದೆ.

ತನ್ನ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡದಿದ್ದಲ್ಲಿ ರಾಜಿನಾಮೆ ನೀಡುವುದಾಗಿ ಉತ್ತರ ಪ್ರದೇಶದ ಸಂಪುಟ ಸಚಿವರು ಮುಖ್ಯಮಮತ್ರಿ ಯೋಗಿ ಆದಿತ್ಯನಾಥ್’ಗೆ ‘ಬೆದರಿಕೆ’ ಹಾಕಿದ್ದಾರೆ.

ಗಾಝಿಪುರ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಖಾತ್ರಿಯವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕೆಂದು ಸಚಿವ ಓಮ್ ಪ್ರಕಾಶ್ ರಾಜಭರ್ ಬೇಡಿಕೆಯಿಟ್ಟಿದ್ದಾರೆ.

ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದೇನೆ; ಒಂದು ವೇಳೆ ವರ್ಗಾವಣೆ ಮಾಡದಿದ್ದಲ್ಲಿ ನಾನು ರಾಜಿನಾಮೆ ನೀಡುತ್ತೇನೆಂದು ರಾಜಭರ್ ಹೇಳಿದ್ದಾರೆ.

ಸಚಿವನ ಬೇಡಿಕೆಗೆ ಬೆಲೆಯಿಲ್ಲವೆಂದಾದಲ್ಲಿ, ಹುದ್ದೆಯಲ್ಲಿ ಮುಂದುವರಿದು ಪ್ರಯೋಜನವಿಲ್ಲವೆಂದು ಅವರು ಹೇಳಿದ್ದಾರೆ.

ಜಿಲ್ಲಾಧಿಕಾರಿ ವರ್ಗಾವಣೆಗೆ ಒತ್ತಾಯಿಸಿ ಧರಣಿಯನ್ನು ಹಮ್ಮಿಕೊಳ್ಳುವುದಾಗಿ ರಾಜಭರ್ ಹೇಳಿದ್ದರು. ಜಿಲ್ಲಾಧಿಕಾರಿ ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಅವರು ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!