
ಲಕ್ನೋ (ಮಾ. 17): ಯೋಗಿ ಆದಿತ್ಯನಾಥ್ ಸರ್ಕಾರ 37 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
5 ಕಮಿಷನರ್ ಸೇರಿದಂತೆ ಗೋರಖ್’ಪುರ ಜಿಲ್ಲಾಧಿಕಾರಿ ರಾಜೀವ್ ರೌತೇಲಾರನ್ನು ವರ್ಗಾವಣೆ ಮಾಡಲಾಗಿದೆ. ರೌತೇಲಾರನ್ನು ದೇವಿ ಪಠಾಣ್’ಗೆ ವರ್ಗಾವಣೆ ಮಾಡಿದ್ದರೆ, ಕೆ ವಿಜಯೇಂದ್ರ ಪಂಡಿಯನ್’ರನ್ನು ಗೋರಖ್’ಪುರ್ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ಸಹರಾನ್ಪುರ ಕಮಿಷನರ್ ದೀಪಕ್ ಅಗರ್’ವಾಲ್’ರನ್ನು ವಾರಣಾಸಿಗೆ ವರ್ಗಾವಣೆ ಮಾಡಿದ್ದರೆ ಸಹರಾನ್ಪುರಕ್ಕೆ ಚಂದ್ರ ಪ್ರಕಾಶ್ ತ್ರಿಪಾಠಿಯನ್ನು ವರ್ಗಾವಣೆ ಮಾಡಲಾಗಿದೆ. ಗೋರಖ್’ಪುರ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ನಂತರ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.