
ಗೋರಕ್’ಪುರ (ಜೂ.14): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ತವರಾದ ಗೋರಖ್;ಪುರದಲ್ಲಿ ದಲಿತರ ಜೊತೆ ಊಟ ಮಾಡಿದ್ದಾರೆ.
ಇಲ್ಲಿನ ಹರ್ನಾಂಪುರ ಗ್ರಾಮದಲ್ಲಿ ಸುಮಾರು 150 ದಲಿತರ ಜೊತೆ ಸೇರಿ ಭೋಜನ ಸೇವಿಸಿದ್ದಾರೆ. ಕಳೆದ ತಿಂಗಳು ಠಾಕೂರರು ಹಾಗೂ ದಲಿತರ ನಡುವೆ ನಡೆದ ಗಲಾಟೆಯಲ್ಲಿ ಮೂವರು ದಲಿತರು ಮೃತಪಟ್ಟಿದ್ದರು. ಆಡಳಿತಾರೂಡ ಬಿಜೆಪಿಗೆ ದಲಿತ ವಿರೋಧಿ ಎಂದು ಜನರು ಜರಿದರು. ಈ ಹಿನ್ನಲೆಯಲ್ಲಿ ಸೌಹಾರ್ದ ಕಾಪಾಡಲು ಯೋಗಿ ಆದಿತ್ಯನಾಥ್ ದಲಿತರ ಜೊತೆ ಊಟ ಮಾಡಿ ನಾವು ನಿಮ್ಮ ವಿರೋಧಿಗಳಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಬಿಂಬಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.