ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಸುಳಿವು ನೀಡಿದ ಕೇಂದ್ರ ಗೃಹ ಸಚಿವ

By Web DeskFirst Published Mar 9, 2019, 3:12 PM IST
Highlights

ಮೊದಲನೆಯದು ಉರಿ, ಎರಡನೆಯದು ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಅನ್ನು ಭಾರತ ಮಾಡಿದೆ. ಮೂರನೆಯದ್ದು  ಸರ್ಜಿಕಲ್ ಸ್ಟ್ರೈಕ್ ನಡೆಯಲಿದೆ ಎನ್ನುವ ಸುಳಿವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೊಟ್ಟಿದ್ದಾರೆ. ಹಾಗಾದ್ರೆ ಅವರು ಏನೆಲ್ಲ ಹೇಳಿದ್ದಾರೆ ನೋಡಿ.
 

ಮಂಗಳೂರು, (ಮಾ.09):  ಮುಂಬರುವ ಲೋಕಸಭಾ ಚುನಾವಣೆ ತಯಾರಿಗೆ ಇಂದು (ಶನಿವಾರ)  ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಬಿಜೆಪಿ ಕ್ಲಸ್ಟರ್‌ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಯಿತು.

ಆದ್ರೆ ಸಮಾವೇಶದಲ್ಲಿಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸುಳಿವು ನೀಡಿದ್ದಾರೆ.

ಕಾಶ್ಮೀರಿಗಳ ಮೇಲೆ ದಾಳಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ: ಮೋದಿ

ಮಂಗಳೂರಿನಲ್ಲಿ ಆಯೋಜಿಸಲಾಗದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, 'ಐದು ವರ್ಷದಲ್ಲಿ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಮೊದಲನೆಯದು ಉರಿ, ಎರಡನೆಯದು ಬಾಲಾಕೋಟ್, ಮೂರನೆಯದ್ದು ನಾನು ಹೇಳಲಾರೆ' ಎಂದು ಹೇಳುವ ಮೂಲಕ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಸುಳಿವು ನೀಡಿದರು.

ನಮ್ಮ ವಾಯುಸೇನೆ ಉಗ್ರರ ಹುಟ್ಟಡಗಿಸಲು ಪಾಕ್ ಭೂಮಿಗೆ ಹೋಗಿ ದಾಳಿ ಮಾಡಿತು. ಈ ಮೂಲಕ ನಾವು ಪಾಕಿಸ್ತಾನಕ್ಕೆ ಸ್ಪಷ್ಡ ಸಂದೇಶ ನೀಡಿದ್ದೇವೆ. ಉಗ್ರವಾದಕ್ಕೆ ನೀವು ಬೆಂಬಲ ಕೊಟ್ಟರೆ ಬೆಲೆ ತೆರಬೇಕಾಗುತ್ತದೆ ಎಂದು ಸಮಾವೇಶದಲ್ಲಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದರು.

ನಮ್ಮ ಮಿಗ್ 21 ಅವರ ಎಫ್ 16 ಉರುಳಿಸುವ ಮೂಲಕ ಪರಾಕ್ರಮ ಮೆರೆದಿದೆ. ಆತಂಕವಾದ ನಮ್ಮ ಮಾನ ಮತ್ತು ಸ್ವಾಭೀಮಾ‌ನಕ್ಕೆ ಸವಾಲಾಗಿದೆ. ಹೀಗಾಗಿ ಇದನ್ನು ಬುಡ ಸಮೇತ ಕಿತ್ತೊಗೆಯುವುದೇ ನಮ್ಮ ಉದ್ದೇಶ ಎಂದು ಹೇಳಿದರು.

ರಾಜನಾಥ್ ಸಿಂಗ್ ಹೇಳಿಕೆಯನ್ನು ಗಮನಿಸಿದರೆ, ಇನ್ನು ಒಂದು ಶಾಸ್ತಿ ಪಾಕಿಸ್ತಾನಕ್ಕೆ ಕಾದಿದೆ ಎನ್ನುವ ಅರ್ಥದಲ್ಲಿ ಹೇಳಿದರು. 

ಸಾಂದರ್ಭಿಕ ಚಿತ್ರ

click me!