ಕೇಂದ್ರ ಸರ್ಕಾರದಿಂದ ಲೋಕಪಾಲ್ ಗೆ ಅಸ್ತು: ಹಜಾರೆಗೆ ಹಜಾರ್ ಸಲಾಂ!

Published : Mar 17, 2019, 02:20 PM IST
ಕೇಂದ್ರ ಸರ್ಕಾರದಿಂದ ಲೋಕಪಾಲ್ ಗೆ ಅಸ್ತು: ಹಜಾರೆಗೆ ಹಜಾರ್ ಸಲಾಂ!

ಸಾರಾಂಶ

ಮೋದಿ ಸರ್ಕಾರದಿಂದ ಐತಿಹಾಸಿಕ ನಿರ್ಧಾರ| ನಾಲ್ವರ ಸದಸ್ಯ ನೇತೃತ್ವದ ಲೋಕಪಾಲ್  ತಂಡ ರಚಿಸಿದ ಸರ್ಕಾರ| ನಾಳೆ ಸರ್ಕಾರದಿಂದ ಅಧಿಕೃತ ಘೋಷಣೆ ಸಾಧ್ಯತೆ| ನ್ಯಾ. ಪಿನಾಕಿ ಚಂದ್ರಘೋಷ್ ನೇತೃತ್ವದ ಲೋಕಪಾಲ್| ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ಪಿನಾಕಿ ಚಂದ್ರಘೋಷ್| ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ ಹೋರಾಟಕ್ಕೆ ಸಂದ ಜಯ|

ನವದೆಹಲಿ(ಮಾ.17): ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಲೋಕಪಾಲ್ ಗೆ ಅಸ್ತು ಎಂದಿದೆ. ನ್ಯಾ. ಪಿನಾಕಿ ಚಂದ್ರಘೋಷ್ ನೇತೃತ್ವದ ನಾಲ್ವರು ಸದಸ್ಯರ ಲೋಕಪಾಲ್ ತಂಡವನ್ನು ರಚಿಸಲಾಗಿದೆ.

ಈ ಕುರಿತು ಕೇಂದ್ರ ಸರ್ಕಾರ ನಾಳೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದ್ದು, ನ್ಯಾ. ಪಿನಾಕಿ ಚಂದ್ರಘೋಷ್ ನೇತೃತ್ವದ ಲೋಕಪಾಲ್ ಕಾರ್ಯೋನ್ಮುಖವಾಗಲಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ಪಿನಾಕಿ ಚಂದ್ರಘೋಷ್ ನೇತೃತ್ವದಲ್ಲಿ ಲೋಕಪಾಲ್ ತಂಡ ರಚಿಸಲಾಗಿದೆ.

ಇನ್ನು ಲೋಕಪಾಲ್ ಗೆ ಆಗ್ರಹಿಸಿ ಕಳೆದ ಹಲವು ವ‍ರ್ಷಗಳಿಂದ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇದು ನ್ಯಾಯಕ್ಕೆ ಸಂದ ಜಯ ಎಂದು ಅಣ್ಣಾ ಹಜಾರೆ ಪ್ರತಿಕ್ರಿಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ