ಆಧಾರ್ ದೃಢೀಕರಣಕ್ಕೆ ಪ್ರಾಧಿಕಾರದಿಂದ ಹೊಸ ತಂತ್ರ

Published : Jan 15, 2018, 10:14 PM ISTUpdated : Apr 11, 2018, 12:36 PM IST
ಆಧಾರ್ ದೃಢೀಕರಣಕ್ಕೆ ಪ್ರಾಧಿಕಾರದಿಂದ ಹೊಸ ತಂತ್ರ

ಸಾರಾಂಶ

ಆಧಾರ್ ದೃಢೀಕರಣ ಮಾಡುವಾಗ ಬಯೋಮೆಟ್ರಿಕ್ ಸಮಸ್ಯೆ ಎದುರಿಸುವವರಿಗೆ ಮುಖ ಚಹರೆಯ ದೃಢೀಕರಣ ತಂತ್ರಜ್ಞಾನವನ್ನು ಬಳಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ನಿರ್ಧರಿಸಿದೆ.

ನವದೆಹಲಿ: ಆಧಾರ್ ದೃಢೀಕರಣ ಮಾಡುವಾಗ ಬಯೋಮೆಟ್ರಿಕ್ ಸಮಸ್ಯೆ ಎದುರಿಸುವವರಿಗೆ ಮುಖ ಚಹರೆಯ ದೃಢೀಕರಣ ತಂತ್ರಜ್ಞಾನವನ್ನು ಬಳಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ನಿರ್ಧರಿಸಿದೆ.

ಬೆರಳಚ್ಚು, ಕಣ್ಪೊರೆ ಮೂಲಕ ಯಾರಿಗೆ ಆಧಾರ್ ದೃಢೀಕರಣ ಸಾಧ್ಯವಾಗುವುದಿಲ್ಲವೋ ಅಂಥವರಿಗೆ ಆಧಾರ್ ಪ್ರಾಧಿಕಾರವು ಹೊಸ ಸೌಲಭ್ಯವನ್ನು ಜುಲೈ 1ರಿಂದ ಪರಿಚಯಿಸಲಿದೆ.

ಆದರೆ ಈ ಸೌಲಭ್ಯ ಪಡೆಯಲು ಅರ್ಜಿದಾರರು, ಬೆರಳಚ್ಚು, ಓಟಿಪಿ ಅಥವಾ ಕಣ್ಪೊರೆಯ ಪೈಕಿ ಯಾವುದಾದರೂ ಒಂದು ದೃಢಿಕರಣವನ್ನು ಕಡ್ಡಾಯವಾಗಿ ನೀಡಲೇಬೇಕು.  

ಕಾಯಿಲೆ, ಕಠಿಣ ಪರಿಶ್ರಮ ಮುಂತಾದ ಬೇರೆ ಬೇರೆ ಕಾರಣಗಳಿಂದ ಕೆಲವರ ಬೆರಳಚ್ಚು ದಾಖಲಾಗುವುದಿಲ್ಲ. ಅಂಥವರಿಗೆ ಈ ಸೌಲಭ್ಯವು ಆಧಾರ್ ಪಡೆಯಲು ಅನುಕೂಲ ಮಾಡಿಕೊಡುತ್ತದೆ ಎಂದು ಪ್ರಾಧಿಕಾರ ಹೇಳಿದೆ.

ಆದರೆ ಇದನ್ನು ಅವಶ್ಯವಿದ್ದಾಗ ಮಾತ್ರ ಬಳಸಲಾಗುವುದೆಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!