
ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥರ ಮೃತದೇಹದಲ್ಲಿ ಸಂಶಯಾಸ್ಪದ ವಿಷಕಾರಿ ಅಂಶಗಳು ಪತ್ತೆಯಾಗಿವೆ ಎಂಬ ಕೆಎಂಸಿ ವೈದ್ಯರ ಆಧರಿಸಿ ಈಗ ಪೊಲೀಸರು ತನಿಖೆ ನಡೆಸುತ್ತಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಪೊಲೀಸರ ತಂಡವೊಂದು ರಸಗೊಬ್ಬರ - ಕೀಟನಾಶಕಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಭೇಟಿ ನೀಡಿದೆ. ಈ ಕೀಟನಾಶಕ-ರಸಗೊಬ್ಬರ ಅಂಗಡಿಗಳಲ್ಲಿ ಮಾರಾಟ ಮಾಡಲಾಗುವ ಕೀಟನಾಶಕಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.
ಚಿನ್ನಾಭರಣ ಸೋದೆ ಮಠಕ್ಕೆ ಹಸ್ತಾಂತರ: ಶಿರೂರು ಶ್ರೀಗಳ ನಿಧನದ ನಂತರ ಪೊಲೀಸರು ತನಿಖೆಗಾಗಿ ತಮ್ಮ ಸುಪರ್ದಿಕ್ಕೆ ತೆಗೆದುಕೊಂಡಿದ್ದ ಶ್ರೀಗಳ ಚಿನ್ನಾಭರಣ, ಹಳೆಯ ಅಮೂಲ್ಯ ವಸ್ತುಗಳು ಮುಂತಾದವುಗಳನ್ನು ಬುಧವಾರ ಶಿರೂರಿನ ದ್ವಂದ್ವ ಮಠವಾದ ಸೋದೆ ಮಠಕ್ಕೆ ಹಸ್ತಾಂತರಿಸಿದ್ದಾರೆ.
ಉಸ್ತುವಾರಿ ಸಮಿತಿ ನೇಮಕ: ಇದೇವೇಳೆ ಸೋದೆ ಮಠದ ಪರವಾಗಿ ಶಿರೂರು ಮಠದ ಉಸ್ತುವಾರಿಯನ್ನು ನೋಡಿಕೊಳ್ಳಲು ೫ ಮಂದಿಯ ಸಮಿತಿಯೊಂದನ್ನು ನೇಮಿಸಲಾಗಿದೆ. ರಹಸ್ಯ ಆರಾಧನೆ: ಶ್ರೀಪಾದರ ಆರಾಧನೆಯನ್ನು ಶ್ರೀಗಳ ಪೂರ್ವಾಶ್ರಮದ ಸಂಬಂಧಿಕರು ಮೂಲ್ಕಿ ಸಮೀಪದ ಶಿಮಂತೂರು ಆದಿಜನಾರ್ದನ ದೇವಸ್ಥಾನದಲ್ಲಿ ಮಂಗಳವಾರ ರಹಸ್ಯವಾಗಿ ನೆರವೇರಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.