ರಾಮ ಮಂದಿರ ನಿರ್ಮಾಣಕ್ಕೆ ಹೊರಟ ಶಿವ ಸೇನೆ

By Web DeskFirst Published Oct 5, 2018, 3:03 PM IST
Highlights

ಶಿವ ಸೇನಾ ಮುಖಂಡ ಉದ್ದವ್ ಠಾಕ್ರೆ ಅಯೋಧ್ಯೆಗೆ ತೆರಳಲಿದ್ದು, ರಾಮಮಂದಿರ ನಿರ್ಮಾಣ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ  ಹೇಳಲಾಗಿದೆ. 

ಮುಂಬೈ :  ಶಿವ ಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಉದ್ದವ್ ಅವರು ಶೀಘ್ರದಲ್ಲೇ ಅಯೋಧ್ಯೆಗೆ ತೆರಳಲಿದ್ದು, ರಾಮಮಂದಿರವನ್ನು ನಿರ್ಮಾಣ ಮಾಡಲಿದ್ದಾರೆ. 

ಅಕ್ಟೋಬರ್ 18ರಿಂದ ಅವರು ದಸರಾ ರ್ಯಾಲಿ ನಡೆಸಲಿದ್ದು,  ಈ ವೇಳೆ ಅವರ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿ ಹೊರಬೀಳಲಿದೆ ಎಂದು ಶಿವ ಸೇನೆ ಮುಖವಾಣಿ ಸಾಮ್ನಾದಲ್ಲಿ ಹೇಳಲಾಗಿದೆ. 

ರಾಮ ಜನ್ಮಭೂಮಿ  ಟ್ರಸ್ಟ್ ಮುಖಂಡರೊಂದಿಗೆ ಸಭೆಯನ್ನು ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ. 

ಅಲ್ಲದೇ ಈ ಸಭೆಯಲ್ಲಿ ಮಾತನಾಡಿರುವ ಟ್ರಸ್ಟ್ ಮುಖಂಡರು ರಾಮ ಮಂದಿರವನ್ನು ನಿರ್ಮಾಣ ಮಾಡುವ ಧೈರ್ಯ ಇರುವುದು ಕೇವಲ ಶಿವ ಸೇನೆಗೆ ಮಾತ್ರವೇ ಎಂದು ಹೇಳಿದ್ದಾರೆ ಎಂದೂ ಕೂಡ ಸಾಮ್ನಾದಲ್ಲಿ ತಿಳಿಸಲಾಗಿದೆ. 

click me!