ಡಿ.ಕೆ.ಶಿವಕುಮಾರ್ ರಿವೀಲ್ ಮಾಡಿದ ಬಿಜೆಪಿ ಸೀಕ್ರೇಟ್ ಪ್ಲಾನ್

Published : Dec 05, 2018, 12:21 PM IST
ಡಿ.ಕೆ.ಶಿವಕುಮಾರ್ ರಿವೀಲ್ ಮಾಡಿದ ಬಿಜೆಪಿ ಸೀಕ್ರೇಟ್ ಪ್ಲಾನ್

ಸಾರಾಂಶ

ಬಿಜೆಪಿ ಮುಖಂಡರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದು ಈ ವಿಚಾರ ತಮಗೆ ತಿಳಿದಿದೆ. ಬಿಜೆಪಿಯಲ್ಲಿ 2 ತಂಡಗಳಾಗಿ ಸರ್ಕಾರವನ್ನು ಉರುಳಿಸುವ ಯತ್ನ ನಡೆದಿದೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರು :  ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಸರ್ಕಾ​ರ​ವ​ನ್ನು ಅಸ್ಥಿರಗೊಳಿಸಲು ರಾಜ್ಯದಲ್ಲಿ ಎರಡು ತಂಡಗಳು ಕಾರ್ಯನಿರ್ವಹಿಸುತ್ತಿವೆ. ನಾವೇನೂ ಕಣ್ಮುಚ್ಚಿ ಕುಳಿತಿಲ್ಲ. ನಮ್ಮ ಕೆಲಸ ನಾವೂ ಮಾಡು​ತ್ತಿ​ದ್ದೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸದಾಶಿವನಗರದ ತಮ್ಮ ಮನೆಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಕಿ ಇಲ್ಲದೆ ಹೊಗೆ ಬರುವುದಿಲ್ಲ ಎಂದು ನಮಗೆ ಗೊತ್ತಿದೆ. ನಡೆ​ಯು​ತ್ತಿ​ರುವ ಎಲ್ಲಾ ಬೆಳ​ವ​ಣಿ​ಗೆ​ಗ​ಳು ನಮ್ಮ ಗಮನದಲ್ಲಿದ್ದು, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದರು.

ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅವರು ತಿಳಿದಿದ್ದಾರೆ. ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಬಿಜೆ​ಪಿಯ ಒಂದು ತಂಡಕ್ಕೆ ಅದೇ ಪಕ್ಷದ ಮತ್ತೊಂದು ತಂಡ ಏನು ಮಾಡು​ತ್ತಿದೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್‌ ಶಾಸಕರನ್ನು ಸೆಳೆಯುವುದರ ಬಗ್ಗೆ ಏನೂ ನಡೆದಿಲ್ಲ, ಆಡಿಯೋ ನಕಲಿ ಎಂದು ಹೇಳುತ್ತಿರುವ ಜಗದೀಶ್‌ ಶೆಟ್ಟರ್‌, ಸಿ.ಟಿ.ರವಿ ಮತ್ತು ಕೋಟ ಶ್ರೀನಿವಾಸ್‌ ಪೂಜಾರಿ ಅವರಿಗೆ ಆ ಪಕ್ಷದ ಮತ್ತೊಂದು ತಂಡ ಆಪರೇಷನ್‌ ಕಮಲ ಮಾಡಲು ಯತ್ನಿ​ಸು​ತ್ತಿ​ರುವ ಬಗ್ಗೆ ಮಾಹಿತಿಯೇ ಇಲ್ಲ. ಆದರೆ, ಸರ್ಕಾ​ರಕ್ಕೆ ಬಿಜೆ​ಪಿ​ಯಲ್ಲಿ ಏನು ನಡೆ​ಯುತ್ತಿದೆ. ಜನಾರ್ದನ ರೆಡ್ಡಿ ಅವರು ಯಾರನ್ನು ಭೇಟಿ ಮಾಡಲು ಬ್ರಿಗೇಡ್‌ ಟವರ್‌ಗೆ ಹೋಗಿದ್ದರು, ಜಿಂದಾಲ್‌ ಆಸ್ಪತ್ರೆಗೆ ಯಾರೆಲ್ಲಾ ಹೋಗಿ ಬಂದಿದ್ದಾರೆ ಎಂಬುದೂ ಸೇರಿ​ದಂತೆ ಎಲ್ಲಾ ಬೆಳ​ವ​ಣಿ​ಗೆ​ಗಳ ಬಗ್ಗೆ ಮಾಹಿತಿಯಿದೆ ಎಂದ​ರು.

ದುಬೈ ಮೂಲದ ಉದ್ಯಮಿಯೊಂದಿಗೆ ಮಾತನಾಡಿದಾತ ತಮ್ಮ ಆಪ್ತ ಸಹಾಯಕ ಅಲ್ಲ ಎಂದು ಶ್ರೀರಾ​ಮುಲು ಹೇಳು​ತ್ತಿ​ದ್ದಾರೆ. ಹಾಗಿ​ದ್ದರೆ, ಆ ವ್ಯಕ್ತಿ​ಯನ್ನು ಶ್ರೀರಾ​ಮುಲು ಏಕೆ ಇಟ್ಟುಕೊಂಡಿದ್ದಾರೆ ಎಂದು ಶಿವಕುಮಾರ್‌ ಈ ಸಂದ​ರ್ಭ​ದಲ್ಲಿ ಪ್ರಶ್ನಿ​ಸಿ​ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಕಲಿ ಕ್ಯೂಆರ್​ ಕೋಡ್​ಗೆ ಬಲಿಯಾಗದಿರಿ ಎಚ್ಚರ! ಯಾಮಾರಿದ್ರೆ ಅಕೌಂಟ್​ ಖಾಲಿ: ನಕಲಿ ಗುರುತಿಸುವುದು ಹೇಗೆ?
ವಿಶ್ವ ಕನ್ನಡ ಹಬ್ಬ' ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಮಹಿಳೆಯರಿಗೆ ಪದವಿ ಆಮಿಷ; ಸರ್ಕಾರದ ₹40 ಲಕ್ಷ ದುರ್ಬಳಕೆ!