
ಪ್ರಾಕೃತಿಕ ವಿಕೋಪಗಳು ಸ್ವಾಭಾವಿಕ, ಮನುಷ್ಯ ಅದನ್ನು ತಡೆಯಲು ಅದೆಷ್ಟೇ ಪ್ರಯತ್ನಿಸಿದರೂ ವ್ಯರ್ಥ. ವಾಸ್ತವವಾಗಿ ಮನುಷ್ಯನೇ ಇಂತಹ ದುರಂತಕ್ಕೆ ಕಾರಣಕರ್ತ. ಇಂತಹ ವಿಕೋಪಗಳಲ್ಲಿ ಬಿರುಗಾಳಿ ಕೂಡಾ ಒಂದು. ಇದರ ರಭಸಕ್ಕೆ ಎಲ್ಲವೂ ಧ್ವಂಸವಾಗುತ್ತದೆ, ನಾವೇನೇ ಕಸರತ್ತು ಮಾಡಿದರೂ ಇದರಿಂದ ಪಾರಾಗಲು ಸಾಧ್ಯವಿಲ್ಲ. ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಸಿಸಿಟಿವಿ ದೃಶ್ಯವುಳ್ಳ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಬಿರುಗಾಳಿಯ ರಭಸಕ್ಕೆ ಮಾಲ್ ಒಂದು ಧ್ವಂಸವಾದ ದೃಶ್ಯಗಳು ಇದು ಒಳಗೊಂಡಿದೆ.
ಮಾಲ್ ಒಂದರಲ್ಲಿದ್ದ ಜನರು ಬಿರುಗಾಳಿಯಿಂದ ಪಾರಾಗಲು ಪ್ರಯತ್ನಿಸುವುದರೊಂದಿಗೆ ಮಾಲ್'ನ್ನು ಸುರಕ್ಷಿತವಾಗಿಡಲು ಹರಸಾಹಸಪಟ್ಟಿರುವುದು ಈ ವಿಡಿಯೋದಲ್ಲಿ ಕಂಡು ಬರುತ್ತದೆ. ಇದಕ್ಕಾಗಿ ಮೊದಲಿಗೆ ಮಾಲ್'ನ ಪ್ರವೇಶ ದ್ವಾರವನ್ನು ಭದ್ರವಾಗಿ ಮುಚ್ಚುತ್ತಾರೆ. ಆದರೆ ಬಿರುಗಾಳಿಯ ರಭಸವನ್ನು ತಡೆಯದಾದ ಬಾಗಿಲು ಪುಡಿಪುಡಿಯಾಗಿ ಬೀಳುತ್ತದೆ. ಇನ್ನು ಗಾಳಿಯ ರಭಸಕ್ಕೆ ಮಾಲ್ ಒಳಗಿನ ವಸ್ತುಗಳು ಸಂಪೂರ್ಣವಾಗಿ ಧ್ವಂಸಗೊಂಡಿರುವುದೂ ಿಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ತಂತ್ರಜ್ಞಾನ ಅದೆಷ್ಟೇ ಮುಂದುವರೆದರೂ ಪ್ರಕೃತಿಯ ಎದುರು ಮನುಷ್ಯ ತುಂಬಾ ಚಿಕ್ಕವನು. ಪ್ರಕೃತಿಯ ಕೋಪವನ್ನು ಎದುರಿಸಲು ಅಸಾಧ್ಯವೆಂದೇ ಹೇಳಬಹುದು
.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.