ಲೋಕಾಯುಕ್ತರ ಹತ್ಯೆಗೆ ಯತ್ನ ಖಂಡಿಸಿ ನಾಳೆ ವಕೀಲರ ಪ್ರತಿಭಟನೆ

Published : Mar 07, 2018, 08:41 PM ISTUpdated : Apr 11, 2018, 12:51 PM IST
ಲೋಕಾಯುಕ್ತರ ಹತ್ಯೆಗೆ ಯತ್ನ ಖಂಡಿಸಿ ನಾಳೆ ವಕೀಲರ ಪ್ರತಿಭಟನೆ

ಸಾರಾಂಶ

ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಚಾಕು ಇರಿದು ಹತ್ಯಗೆ ಯತ್ನಿಸಿದ ಘಟನೆಗೆ ರಾಜ್ಯ ಸರ್ಕಾರವೇ ಕಾರಣ.  ಕೊಲೆ ಸುಲಿಗೆ ನಡೆಯವುದಕ್ಕೆ ಇದು ಸ್ಪಷ್ಟ ನಿರ್ದರ್ಶನ. 

ಬೆಂಗಳೂರು (ಮಾ. 07): ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಚಾಕು ಇರಿದು ಹತ್ಯಗೆ ಯತ್ನಿಸಿದ ಘಟನೆಗೆ ರಾಜ್ಯ ಸರ್ಕಾರವೇ ಕಾರಣ.  ಕೊಲೆ ಸುಲಿಗೆ ನಡೆಯವುದಕ್ಕೆ ಇದು ಸ್ಪಷ್ಟ ನಿರ್ದರ್ಶನ. 

ಲೋಕಾಯುಕ್ತ ಸಂಸ್ಥಗೆ ಯಾರು ಬರಬಾರದು ಎಂದು ಇಂತಹ ಘಟನೆ ನಡೆದಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ  ಎ ಪಿ ರಂಗನಾಥ್ ಹೇಳಿದ್ದಾರೆ.  ಇಂತಹ ಅನೇಕ ನಿದರ್ಶನವಿದೆ.  ವಕೀಲರಗಳ ಮೇಲೂ ಹಲ್ಲೆಗಳಾಗಿವೆ.  ಸರ್ಕಾರಕ್ಕೆ ನೈತಿಕತೆ ಇದ್ರೆ ರಾಜಿನಾಮೆ ಕೊಡಲಿ.  ಲೋಕಾಯುಕ್ತರ ಮೇಲೆ ಹೀಗಾದ್ರೆ ಸಾಮಾನ್ಯರ ಗತಿ ಏನು?  ನಾವು ಇದನ್ನ ಖಂಡಿಸಿ ನಾಳೆ ಸಿಟಿ ಸಿವಿಲ್ ಕೋರ್ಟ್ ಮುಂದೆ ವಕೀಲರ ವತಿಯಿಂದ ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ.  

ಒಂದು ವರ್ಷದ ಹಿಂದೆಯೇ ಸರ್ಕಾರಕ್ಕೆ ಗುಪ್ತಚರ ಇಲಾಖೆ ರಿರ್ಪೊರ್ಟ್ ಕೊಟ್ಟಿದೆ.  ಲೋಕಾಯುಕ್ತ ಕಛೇರಿಯಲ್ಲಿ ಭದ್ರತೆಯಿಲ್ಲ ಎಂದು ಸರ್ಕಾರಕ್ಕೆ ವರದಿ ಕೊಟ್ಟಿತ್ತು.  ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದು ರಂಗನಾಥ್ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

HD Kumaraswamy birthday: ಎಚ್‌ಡಿಕೆಗೆ  ₹3.50 ಲಕ್ಷದ 25 ಗ್ರಾಂನ ಚಿನ್ನದ ಸರ ಕೊಟ್ಟ ಅಭಿಮಾನಿ!
ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ Congress-BJP ನಡುವೆ ಗದ್ದಲ