
ಮುಂಬೈ : ದೇವಾಲಯಗಳಲ್ಲಿ ಸಾಮಾನ್ಯವಾಗಿ ಸಿಹಿ ಪದಾರ್ಥಗಳನ್ನು ಪ್ರಸಾದ ರೂಪದಲ್ಲಿ ಕೊಡುವುದನ್ನು ನೋಡಿದ್ದೀರಿ. ಆದರೆ ದೇವಾಲಯದಲ್ಲಿ ಬಂಗಾರವನ್ನು ಪ್ರಸಾದ ರೂಪದಲ್ಲಿ ನೀಡಿದರೆ ಹೇಗಿರುತ್ತದೆ..?ಹೌದು ಇಲ್ಲೊಂದು ದೇವಾಲಯದಲ್ಲಿ ಸಿಹಿಯಾದ ಪ್ರಸಾದದ ಬದಲಾಗಿ ಬಂಗಾರವನ್ನೇ ಭಕ್ತರಿಗೆ ನೀಡಲಾಗುತ್ತದೆ.
ಮಧ್ಯ ಪ್ರದೇಶದ ರತ್ಲಾಮ್ ಪ್ರದೇಶದಲ್ಲಿರುವ ಮಹಾಲಕ್ಷ್ಮೀ ದೇವಾಲಯದಲ್ಲಿ ಬಂದ ಭಕ್ತರಿಗೆಲ್ಲರಿಗೂ ಕೂಡ ದೀಪಾವಳಿ ಸಂದರ್ಭದಲ್ಲಿ ಬಂಗಾರ ಅಥವಾ ಬೆಳ್ಳಿಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಆದ್ದರಿಂದ ಸಾವಿರಾರು ಮೈಲಿ ದೂರಗಳಿಂದ ಈ ದೇವಾಲಯಕ್ಕೆ ಭಕ್ತರು ಆಗಮಿಸುತ್ತಾರೆ.
ಬಂದ ಭಕ್ತರು ಇಲ್ಲಿ ಬಂಗಾರ, ಬೆಳ್ಳಿಯನ್ನು ಪ್ರಸಾದ ರೂಪದಲ್ಲಿ ಸ್ವೀಕಾರ ಮಾಡಿದಲ್ಲಿ ಜೀವನದಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯು ಇದೆ. ಅಲ್ಲದೇ ಇಲ್ಲಿ ನೀಡಲಾಗುವ ಬಂಗಾರವನ್ನು ಯಾರೂ ಆಭರಣ ಎಂದು ಪರಿಗಣಿಸುವುದಿಲ್ಲ ಬದಲಾಗಿ ದೇವರಿಂದ ಸಿಕ್ಕಿದ ಮಹಾನ್ ಪ್ರಸಾದ ಎಂದೇ ಭಾವಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.