ಶಕುನಗಳನ್ನು ನಂಬುವುದಿಲ್ಲ: ಸಿಎಂ ಸಿದ್ದರಾಮಯ್ಯ

Published : Jan 20, 2017, 12:44 PM ISTUpdated : Apr 11, 2018, 12:59 PM IST
ಶಕುನಗಳನ್ನು ನಂಬುವುದಿಲ್ಲ: ಸಿಎಂ ಸಿದ್ದರಾಮಯ್ಯ

ಸಾರಾಂಶ

ಕಾಗೆ, ಗುಬ್ಬಿ ಪಕ್ಷಿಗಳೆಲ್ಲಾ ಕೂತಿದ್ದಕ್ಕೇ ನಂಬಿಕೊಂಡು ಇರೋಕೆ ಆಗುತ್ತಾ? ಮರದ ಕೆಳಕ್ಕೆ ಕೂತಿದ್ದೇ ಅದಕ್ಕೆ ಪಕ್ಷಿಯೊಂದು ಹಿಕ್ಕೆ ಹಾಕಿದೆ,  ಎಂದು ಸಿಎಂ ಪ್ರತಿಕ್ರಿಯಿಸಿದ್ದಾರೆ.

ಶಿವಮೊಗ್ಗ (ಜ.20): ನಿನ್ನೆ ಕಾಸರಗೋಡಿನ ಮಂಜೇಶ್ವರದಲ್ಲಿ ಕಾಗೆ ಹಿಕ್ಕೆ ಬಿದ್ದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.  

ಕಾಗೆ, ಗುಬ್ಬಿ ಪಕ್ಷಿಗಳೆಲ್ಲಾ ಕೂತಿದ್ದಕ್ಕೇ ನಂಬಿಕೊಂಡು ಇರೋಕೆ ಆಗುತ್ತಾ? ಮರದ ಕೆಳಕ್ಕೆ ಕೂತಿದ್ದೇ ಅದಕ್ಕೆ ಪಕ್ಷಿಯೊಂದು ಹಿಕ್ಕೆ ಹಾಕಿದೆ,  ಎಂದು ಸಿಎಂ ಪ್ರತಿಕ್ರಿಯಿಸಿದ್ದಾರೆ.

ಮುಂದುವರಿದು, ತಾವು ಇಂತಹ ಶಕುನಗಳನ್ನ ನಂಬುವುದಿಲ್ಲವೆಂದೂ ಅವರು ಹೇಳಿದ್ದಾರೆ.

ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ,  ನ್ಯಾ. ವಿಶ್ವನಾಥ್ ಶೆಟ್ಟಿಯವರು ನಿವೇಶನ ಪಡೆದಿರುವ ಬಗ್ಗೆ ರಾಜ್ಯಪಾಲರು ಸ್ಪಷ್ಟಿಕರಣ ಕೇಳಿದ್ದಾರೆ. ಮಾಜಿ ಲೋಕಾಯುಕ್ತ ನ್ಯಾ. ವೆಂಕಟಾಚಲ ಸೇರಿದಂತೆ ಎಲ್ಲರೂ ನಿವೇಶನ ಪಡೆದವರೇ, ಅದನ್ನು ದೊಡ್ಡದು ಮಾಡೋಕೆ ಅಗೋಲ್ಲ. ಹೀಗಾಗಿ ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕೇಳಿದ ಸ್ಪಷ್ಟನೆ ನೀಡಿ ಅವರ ಹೆಸರನ್ನೇ ಪುನಃ ಶಿಫಾರಸ್ಸು ಮಾಡುತ್ತೆವೆಂದು ಸಿಎಂ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲಸದಾಳು ಜೊತೆಗೇ ಯಜಮಾನಿಯ ಕುಚ್​ ಕುಚ್! ಅಮ್ಮನ ಕಳ್ಳಾಟ ಕಣ್ಣಾರೆ ಕಂಡ ಮಗ, 6 ತಿಂಗಳ ಕೊಲೆ ಕೇಸ್ ಈಗ ಬಯಲಾಗಿದ್ದೇ ರೋಚಕ!​​
Karnataka Hate Speech Bill 2025: ಮಸೂದೆಯನ್ನೇ ಓದದೆ ಕುರುಡಾಗಿ ಪ್ರತಿಪಕ್ಷಗಳಿಂದ ಕ್ಷುಲ್ಲಕ ವಿರೋಧ