ಚೆನ್ನೈ(ಅ.06): ಸಿಎಂ ಜಯಲಲಿತಾ ಆರೋಗ್ಯ ಮಾಹಿತಿ ನೀಡಲು ಕೋರಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ಆರೋಗ್ಯ ಮಾಹಿತಿ ನೀಡಲು ನಿರಾಕರಿಸಿದೆ.
ಕಳೆದ 15 ದಿನಗಳಿಂದ ಯಕ್ಷ ಪ್ರಶ್ನೆಯಾಗಿ ಉಳಿದಿರುವ ಸಿಎಂ ಜಯಲಲಿತಾ ಆರೋಗ್ಯದ ಮಾಹಿತಿಯನ್ನ ಬಹಿರಂಗ ಪಡಿಸದ ಹಿನ್ನೆಲೆಯಲ್ಲಿ, ಮಾಹಿತಿ ಕೋರಿ ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ.
ಕಳೆದ ವಾರ ಅರ್ಜಿ ಅಂಗಿಕರಿಸಿ ಆರೋಗ್ಯ ಮಾಹಿತಿ ನೀಡುವಂತೆ ಆದೇಶಿಸಿದ್ದ ಕೋರ್ಟ್, ಇಂದು ಈ ಅರ್ಜಿ ಕೇವಲ ಪ್ರಚಾರಕ್ಕೆ ಅರ್ಜಿ ಸಲ್ಲಿಸಿದಂತೆ ಇದೆ ಎಂದು ಅಭಿಪ್ರಾಯ ಪಟ್ಟು ಅರ್ಜಿಯನ್ನೇ ತಿರಸ್ಕರಿಸಿದೆ. ಕೋರ್ಟ್ನ ಈ ದ್ವಂದ್ವ ಹೇಳಿಕೆ ಅಚ್ಚರಿಯುಂಟು ಮಾಡಿದೆ.