ಹಸುಳೆ ಮೈಯಲ್ಲಿ ಬಾಂಬ್ ಸಾಗಣೆ..!

Published : Jan 28, 2018, 08:14 AM ISTUpdated : Apr 11, 2018, 01:11 PM IST
ಹಸುಳೆ ಮೈಯಲ್ಲಿ ಬಾಂಬ್ ಸಾಗಣೆ..!

ಸಾರಾಂಶ

ಮಕ್ಕಳನ್ನು ಬಳಸಿಕೊಂಡು ಆತ್ಮಾಹುತಿ ದಾಳಿ ನಡೆಸುವಂಥ ನೀಚ ಕೃತ್ಯಕ್ಕೆ ಉಗ್ರರು ಇಳಿಯುವ ಹಲವು ಪ್ರಕರಣಗಳು ಈ ಹಿಂದೆ ವರದಿಯಾಗಿದೆ. ಆದರೆ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು, ಕುಂದುಜ್ ನಗರದ ಮೇಲೆ ಸ್ಫೋಟ ನಡೆಸಲು ಬೇಕಾದ ಸ್ಫೋಟಕ ಪದಾರ್ಥಗಳನ್ನು ಸಾಗಿಸಲು 4 ತಿಂಗಳ ಹಸುಗೂಸನ್ನು ಬಳಸಿಕೊಂಡ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 

ಕಾಬೂಲ್: ಮಕ್ಕಳನ್ನು ಬಳಸಿಕೊಂಡು ಆತ್ಮಾಹುತಿ ದಾಳಿ ನಡೆಸುವಂಥ ನೀಚ ಕೃತ್ಯಕ್ಕೆ ಉಗ್ರರು ಇಳಿಯುವ ಹಲವು ಪ್ರಕರಣಗಳು ಈ ಹಿಂದೆ ವರದಿಯಾಗಿದೆ. ಆದರೆ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು, ಕುಂದುಜ್ ನಗರದ ಮೇಲೆ ಸ್ಫೋಟ ನಡೆಸಲು ಬೇಕಾದ ಸ್ಫೋಟಕ ಪದಾರ್ಥಗಳನ್ನು ಸಾಗಿಸಲು 4 ತಿಂಗಳ ಹಸುಗೂಸನ್ನು ಬಳಸಿಕೊಂಡ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 

ಕೇವಲ ಸ್ಫೋಟಕ ಸಾಗಿಸಲು ಮಾತ್ರವೇ ಮಗುವನ್ನು ಬಳಸಿಕೊಳ್ಳಲಾಗಿತ್ತೇ ಅಥವಾ ಮಗುವನ್ನೇ ಆತ್ಮಾಹುತಿ ಬಾಂಬರ್ ಆಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿತ್ತೇ ಎಂಬ ವಿಷಯ ಇನ್ನೂ ಖಚಿತಪಟ್ಟಿಲ್ಲ. ಪ್ರಕರಣ ಸಂಬಂಧ ಭದ್ರತಾ ಸಂಸ್ಥೆಗಳು ಓರ್ವ ಮಹಿಳೆ ಸೇರಿದಂತೆ 5 ಜನರನ್ನು ಬಂಧಿಸಿದ್ದು ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿವೆ ಎಂದು ಕಾಬೂಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಮಗು ಬಾಂಬರ್: ಪದೇ ಪದೇ ದಾಳಿಗಳಿಂದ ಕಂಗೆಟ್ಟಿರುವ ಕುಂದುಜ್ ನಗರದಲ್ಲಿ ಭದ್ರತಾ ಪಡೆಗಳು ನಗರದ ಹೊರವಲಯದಲ್ಲೇ ಕೆಲ ವರ್ಷಗಳಿಂದ ತೀವ್ರ ತಪಾಸಣೆ ಕೈಗೊಳ್ಳುತ್ತಿವೆ. ಹೀಗಾಗಿ ಉಗ್ರರಿಗೆ ಸ್ಫೋಟಕ ಪದಾರ್ಥ ಸಾಗಿಸುವುದು ಬಹಳ ಕಷ್ಟವಾಗಿದೆ. ಈ ನಡುವೆ ಎರಡು ದಿನಗಳ ಹಿಂದೆ ಕೂಡಾ ವಾಹನವೊಂದರಲ್ಲಿ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಗುಂಪೊಂದನ್ನು ಭದ್ರತಾ ಪಡೆಗಳು ಎಂದಿನಂತೆ ತಪಾಸಣೆ ನಡೆಸಿದ್ದವು.

ಈ ವೇಳೆ 4 ತಿಂಗಳ ಮಗುವಿನ ದೇಹಕ್ಕೆ ಸ್ಫೋಟಕಗಳನ್ನು ಸುತ್ತಿ, ಅದು ಕಾಣದಂತೆ ಬಟ್ಟೆ ಹಾಕಿ ಅದರ ಮೇಲೆ ಸ್ವೆಟರ್ ಹಾಕಿರುವ ಸ್ಪೋಟಕ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಓರ್ವ ಮಹಿಳೆ ಸೇರಿದಂತೆ 5 ಜನರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆಗೆ ಗುರಿಪಡಿಸಿವೆ. ಈ ಹಿಂದೆ ಕೂಡಾ ತಾಲಿಬಾನ್ ಉಗ್ರರು 7-8 ವಯಸ್ಸಿನ ಮಕ್ಕಳನ್ನು ಆತ್ಮಾಹುತಿ ದಾಳಿಗೆ ಬಳಸಿಕೊಂಡಿದ್ದ ಉದಾಹರಣೆ ಇದೆಯಾದರೂ, 4 ತಿಂಗಳ ಮಗುವಿನ ದೇಹಕ್ಕೆ ಸ್ಫೋಟಕ ಸುತ್ತಿ ಅದನ್ನೇ ಉಗ್ರ ಕೃತ್ಯಕ್ಕೆ ಬಳಸಿಕೊಂಡ ಮೊದಲ ಪ್ರಕರಣ ಇದೆನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ
ಶಾಮನೂರು ಶಿವಶಂಕರಪ್ಪ ನಿಧನ: ಕಾಶಿ ಜಗದ್ಗುರು ಶ್ರೀಗಳ ಸಂತಾಪ,ವೀರಭದ್ರೇಶ್ವರ ಜಾತ್ರಾ ಮಹೋತ್ಸವ ರದ್ದು!