
ಹೈದರಾಬಾದ್[ಸೆ. 19] ವಿವಾದಾತ್ಮಕ ಹೇಳಿಕೆಗಳಿಗೆ ಸದಾ ಸುದ್ದಿಯಾಗುವ ಬಿಜೆಪಿ ಎಂಎಲ್ ಟಿ. ರಾಜಾ ಸಿಂಗ್ ಈಗ ಮತ್ತೊಂದು ಅಂಥದ್ದೇ ಹೇಳಿಕೆ ನೀಡಿದ್ದಾರೆ.ದೇಶಕ್ಕೆ ಮಾರಕವಾದ ವಿಧ್ವಂಸಕ ಕೃತ್ಯ ನಡೆಸುವವರನ್ನು ತಡೆಯಲು ಖಾಸಗಿ ಸೇನೆಯೊಂದನ್ನು ಸಿದ್ಧ ಮಾಡುವುದಾಗಿ ಸಿಂಗ್ ಹೇಳಿದ್ದಾರೆ.
ಹೈದರಾಬಾದ್ ಘೋಷಮಹಲ್ ಕ್ಷೇತ್ರ ಪ್ರತಿನಿಧಿಸುವ ಶಾಸಕರು ತೆಲುಗು ಮತ್ತು ಹಿಂದಿಯಲ್ಲಿ ಒಂದೊಂದು ವಿಡಿಯೋ ಸಂದೇಶ ಬಿಡುಡೆ ಮಾಡಿದ್ದಾರೆ.ಅಗತ್ಯ ಬಿದ್ದರೆ ತಮ್ಮ ಸೇನೆ ದೇಶದ ಹೊರಕ್ಕೆ ತರೆಳಿಯೂ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಕಾಶ್ಮೀರ ಆಟಗಾರ್ತಿ ಹುಡುಕಿಕೊಟ್ಟ ಭಾರತೀಯ ಸೇನೆ!
ಬೆಂಗಳೂರಿನಲ್ಲಿ ತಮ್ಮ ಸೇನೆಗೆ 10 ದಿನಗಳ ತರಬೇತಿ ನೀಡಲಾಗುತ್ತದೆ. ಹಿಂದು ಧರ್ಮ ಕಾಪಾಡಿ ಹಿಂದು ರಾಷ್ಟ್ರ ಪರಿಕಲ್ಪನೆಯಲ್ಲಿ ಸೇನೆ ಇರಲಿದೆ ಎಂದು ತಿಳಿಸಿದ್ದಾರೆ.
ಭಾರತದ ಸೇನೆ ಹೇಗೆ ದೇಶದ ಗಡಿಯಲ್ಲಿ ಹೊರಗಿನ ಉಗ್ರರ ಅಟ್ಟಹಾಸವನ್ನು ಅಡಗಿಸುತ್ತಾ ಬಂದಿದೆಯೋ ಅದೇ ರೀತಿ ಈ ಸೇನೆ ದೇಶದ ಒಳಗಣ ವಿಧ್ವಂಸಕರನ್ನು ಬೇಟೆಯಾಡಲಿದೆ.
ಮುಂದಿನ ದಿನಗಳಲ್ಲಿ ದೇಶದ ಎಲ್ಲ ಕಡೆ ಸೇನೆಯ ಶಾಖೆಗಳನ್ನು ತೆರೆಯಲಾಗುತ್ತದೆ.ದೇಶ ವಿರೋಧಿಗಳನ್ನು ನರಕಕ್ಕೆ ಕಳಿಸುವ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ. ಮೊದಲಿಗೆ ಮೂರು ದಿನದ ಕ್ಯಾಂಪ್ ಎಂದು ಲೆಕ್ಕ ಹಾಕಲಾಗಿತ್ತು. ಆದರೆ ಈಗ ಅದನ್ನು 10 ದಿನಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಸಿಂಗ್ಬ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.