ಪ್ರಧಾನಿ ವಿರುದ್ಧ ಸೈಕಲ್ ತುಳಿಯಲು ಹೋಗಿ ಬಿದ್ದ ಪ್ರತಾಪ್!

Published : Jul 26, 2018, 08:57 PM IST
ಪ್ರಧಾನಿ ವಿರುದ್ಧ ಸೈಕಲ್ ತುಳಿಯಲು ಹೋಗಿ ಬಿದ್ದ ಪ್ರತಾಪ್!

ಸಾರಾಂಶ

ಕೇಂದ್ರ ಸರ್ಕಾರದ ವಿರುದ್ಧ ಆರ್ ಜೆಡಿ ಸೈಕಲ್ ಜಾಥಾ ಆಯತಪ್ಪಿ ಬಿದ್ದ ತೇಜ್ ಪ್ರತಾಪ್ ಯಾದವ್  ವೇಗವಾಗಿ ಸೈಕಲ್ ಚಲಾಯಿಸುತ್ತಿದ್ದ ತೇಜ್ ಪ್ರತಾಪ್ ಜನಜಾಗೃತಿ ಜಾಥಾದಲ್ಲಿ ನಗೆಪಾಟಲಿಗೀಡಾದ ಪ್ರತಾಪ್

ಪಾಟ್ನಾ(ಜು.26): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಹಾರ ಸರ್ಕಾರ ವಿರುದ್ಧ ಹೋರಾಟ ರೂಪದಲ್ಲಿ, ಬೆಂಬಲಿಗರೊಂದಿಗೆ ಪಾಟ್ನಾದಿಂದ ಗಯಾದವರೆಗೆ ಸೈಕಲ್ ಯಾತ್ರೆ ಹೊರಟಿದ್ದ ಆರ್‌ಜೆಡಿ ಯುವ ನಾಯಕ ತೇಜ್ ಪ್ರತಾಪ್ ಯಾದವ್ ಆಯತಪ್ಪಿ ಬಿದ್ದ ಘಟನೆ ನಡೆದಿದೆ. 

ತೇಜ್ ಪ್ರತಾಪ್ ವೇಗವಾಗಿ ಸೈಕಲ್ ಚಲಾಯಿಸಿದ್ದು ಸರ್ಕಲ್‌ವೊಂದರಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಹಾನಿಯಿಲ್ಲದೆ ಪಾರಾಗಿದ್ದಾರೆ.

ತೇಜ್ ಪ್ರತಾಪ್ ಬಿದ್ದ ಕೂಡಲೇ ಜೊತೆಯಲ್ಲಿ ಸಾಗುತ್ತಿದ್ದವರು, ಭದ್ರತಾ ಸಿಬ್ಬಂದಿಗಳು ನೆರವಿಗೆ ಧಾವಿಸಿದರೂ ಕೂಡಲೇ ಎದ್ದ ತೇಜ್ ಯಾತ್ರೆ ಮುಂದುವರಿಸಿದರು. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಳಧ ವಿರುದ್ಧ ಜನಜಾಗೃತಿ ಮೂಡಿಸಲು ತೇಜ್ ಪ್ರತಾಪ್ ಸೈಕಲ್ ಯಾತ್ರೆ ಕೈಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!