(ವಿಡಿಯೋ)ತನ್ನ ಕೆನ್ನೆಗೆ ಬಾರಿಸಿದ ಶಿಕ್ಷಕಿಗೆ ಅದೇ ಧಾಟಿಯಲ್ಲಿ ಉತ್ತರಿಸಿದ ವಿದ್ಯಾರ್ಥಿನಿ!

Published : Apr 18, 2017, 02:08 AM ISTUpdated : Apr 11, 2018, 01:10 PM IST
(ವಿಡಿಯೋ)ತನ್ನ ಕೆನ್ನೆಗೆ ಬಾರಿಸಿದ ಶಿಕ್ಷಕಿಗೆ ಅದೇ ಧಾಟಿಯಲ್ಲಿ ಉತ್ತರಿಸಿದ ವಿದ್ಯಾರ್ಥಿನಿ!

ಸಾರಾಂಶ

ಶಿಕ್ಷಕ ವೃತ್ತಿ ಒಂದು ಗೌರವಯುತ ಹಾಘೂ ಚಾಲೆಂಜಿಂಗ್ ವೃತ್ತಿ. ಆದರೆ ಕೆಲವೊಮ್ಮೆ ಏಕ ಕಾಲದಲ್ಲಿ ಹಲವಾಋಉ ವಿದ್ಯಾರ್ಥಿಯರನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಬಹಳ ಕಠಿಣ ಕೆಲಸವಾಗುತ್ತದೆ, ಅದರಲ್ಲೂ ಕಿರೋರಾವಸ್ಥೆಯ ವಿದ್ಯಾರ್ಥಿಗಳನ್ನು ಕಂಟ್ರೋಲ್ ಮಾಡುವುದು ಬಲು ಕಷ್ಟ. ಆದರೆ ಚೀನಾದ ತರಗತಿ ಕೊಠಡಿಯಲ್ಲಿ ನಡೆದ ಘಟನೆಯೊಂದು ಸದ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು, ನೋಡುಗರ ಮನದಲ್ಲಿ ಈ ರೀತಿಯೂ ಆಗುತ್ತದಾ ಎಂದು ಯೋಚಿಸುವಂತೆ ಮಾಡಿದೆ.

ಶಿಕ್ಷಕ ವೃತ್ತಿ ಒಂದು ಗೌರವಯುತ ಹಾಘೂ ಚಾಲೆಂಜಿಂಗ್ ವೃತ್ತಿ. ಆದರೆ ಕೆಲವೊಮ್ಮೆ ಏಕ ಕಾಲದಲ್ಲಿ ಹಲವಾಋಉ ವಿದ್ಯಾರ್ಥಿಯರನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಬಹಳ ಕಠಿಣ ಕೆಲಸವಾಗುತ್ತದೆ, ಅದರಲ್ಲೂ ಕಿರೋರಾವಸ್ಥೆಯ ವಿದ್ಯಾರ್ಥಿಗಳನ್ನು ಕಂಟ್ರೋಲ್ ಮಾಡುವುದು ಬಲು ಕಷ್ಟ. ಆದರೆ ಚೀನಾದ ತರಗತಿ ಕೊಠಡಿಯಲ್ಲಿ ನಡೆದ ಘಟನೆಯೊಂದು ಸದ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು, ನೋಡುಗರ ಮನದಲ್ಲಿ ಈ ರೀತಿಯೂ ಆಗುತ್ತದಾ ಎಂದು ಯೋಚಿಸುವಂತೆ ಮಾಡಿದೆ.

ಚೀನಾದ ಸಾಮಾಜಿ ಜಾಲಾತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ವಿದ್ಯಾರ್ಥಿನಿಯ ಕೆಟ್ಟ ವರ್ತನೆಯಿಂದ ಬೇಸತ್ತ ಶಿಕ್ಷಕಿಯೊಬ್ಬಳು ಆಕೆಗೆ ಬೈಯ್ಯುತ್ತಾಳೆ. ಆದರೆ ಶಿಕ್ಷಕಿ ಎಂಬ ಗೌರವನ್ನೂ ತೋರದ ವಿದ್ಯಾರ್ಥಿನಿ ತಾನೂ ಜಗಳ ಮಾಡುತ್ತಾಳೆ. ಹೀಗೆ ಮಾತಿಗೆ ಮಾತು ಬೆಳೆದು ಶಿಕ್ಷಕಿ ಆಕೆಗೆ ಹೊಡೆದಿರುವುದು ಕಂಡು ಬರುತ್ತದೆ. ಆದರೆ ಈ ವಿಚಾರ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಶಿಕ್ಷಕಿಯಿಂದ ಏಟು ತಿಂದ ವಿದ್ಯಾರ್ಥಿನಿ ನಾನೂ ಏನೂ ಕಡಿಮೆ ಇಲ್ಲ ಎನ್ನುವಂತೆ ಮರು ಕ್ಷಣವೇ ಶಿಕ್ಷಕಿಯ ಕಪಾಳಕ್ಕೆ ಬಾರಿಸುತ್ತಾಳೆ. ವಿದ್ಯಾರ್ಥಿನಿಯ ದುರ್ವರ್ತನೆ ಕಂಡ ಶಿಕ್ಷಕಿಗೆ ಕೋಪ ನೆತ್ತಿಗೇರಿ ನಾನ್ಯಾಕೆ ಬಿಡಲಿ ಎನ್ನುವ ಧಾಟಿಯಲ್ಲಿ ಮತ್ತೆ ಹೊಡೆಯುತ್ತಾಳೆ. ಹೀಗೆ ಇವರಿಬ್ಬರ ಜಗಳ ಅತಿರೇಕಕ್ಕೆ ತಿರುಗಿ ಕೊನೆಗೆ ಇಡೀ ತರಗತಿಯ ವಿದ್ಯಾರ್ಥಿಗಳು ಇವರಿಬ್ಬರನ್ನು ಬೇರ್ಪಡಿಸಲು ಹರ ಸಾಹಸಪಟ್ಟಿರುವುದು ಸ್ಪಷ್ಟವಾಗಿ ಕಾಣುತ್ತದೆ.  

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌