
ಬೆಂಗಳೂರು(ಜೂ.3): ನಗರದ ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಲ್ಲಿ ರೈಲು ಬದಲಾವಣೆಗೆ ಇದ್ದ ಅವಧಿಯನ್ನು ಹೆಚ್ಚಳ ಮಾಡಿದೆ. ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣ ದೇಶದ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿದ್ದು, ದಿನವೊಂದಕ್ಕೆ ಸುಮಾರು27 ಸಾವಿರ ಪ್ರಯಾಣಿಕರು ಈ ನಿಲ್ದಾಣದಿಂದ ಸಂಚರಿಸುತ್ತಾರೆ.
ಈ ಮೊದಲು ರೈಲು ಬದಲಾವಣೆಗೆ ಕಡಿಮೆ ಅವಧಿ ಮೀಸಲಿದ್ದ ಪರಿಣಾಮ, ಪ್ರಯಾಣಿಕರು ಬೇರೆ ರೈಲು ಹತ್ತಲು ಪರದಾಡಬೇಕಿತ್ತು. ಇದೀಗ ನೇರಳೆ ಲೇನ್ [ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ] ಮತ್ತು ಗ್ರೀನ್ ಲೇನ್[ನಾಗಸಂದ್ರದಿಂದ ಎಲಚೇನಹಳ್ಳಿ] ಮಾರ್ಗದ ರೈಲುಗಳ ಸಮಯದಲ್ಲಿ ತುಸು ಬದಲಾವಣೆ ಮಾಡಲಾಗಿದೆ.
ಇದರಿಂದ ಈ ಎರಡೂ ಮಾರ್ಗಗಳ ರೈಲುಗಳು ಮೆಜೆಸ್ಟಿಕ್ ತಲುಪಲು ಈ ಮೊದಲು ಇದ್ದ ಸಮಯದ ಅವಧಿಯಲ್ಲಿ ಬದಲಾವಣೆಯಾಗಿದ್ದು, ಪ್ರಯಾಣಿಕರಿಗೆ ಮೆಜೆಸ್ಟಿಕ್ ನಲ್ಲಿ ಒಂದು ರೈಲಿನಿಂದ ಮತ್ತೊಂದು ರೈಲಿಗೆ ಮಾರ್ಗ ಬದಲಾಯಿಸಲು 3 ನಿಮಿಷಗಳ ಕಾಲಾವಕಾಶ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.