ರಾಮೇಶ್ವರಂ ಸಮುದ್ರದಲ್ಲಿ ಇಂದು ಶ್ರೀದೇವಿ ಅಸ್ಥಿ ವಿಸರ್ಜನೆ

Published : Mar 03, 2018, 07:08 AM ISTUpdated : Apr 11, 2018, 12:43 PM IST
ರಾಮೇಶ್ವರಂ ಸಮುದ್ರದಲ್ಲಿ ಇಂದು ಶ್ರೀದೇವಿ ಅಸ್ಥಿ ವಿಸರ್ಜನೆ

ಸಾರಾಂಶ

ದುಬೈನಲ್ಲಿ ಫೆ.24ರಂದು ಸಾವನ್ನಪ್ಪಿದ ನಟಿ ಶ್ರೀದೇವಿ ಅವರ ಚಿತಾಭಸ್ಮವನ್ನು ರಾಮೇಶ್ವರಂಗೆ ತರಲಾಗಿದ್ದು, ಶನಿವಾರ ಅದನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ನವದೆಹಲಿ: ದುಬೈನಲ್ಲಿ ಫೆ.24ರಂದು ಸಾವನ್ನಪ್ಪಿದ ನಟಿ ಶ್ರೀದೇವಿ ಅವರ ಚಿತಾಭಸ್ಮವನ್ನು ರಾಮೇಶ್ವರಂಗೆ ತರಲಾಗಿದ್ದು, ಶನಿವಾರ ಅದನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಶ್ರೀದೇವಿಯ ಚಿತಾಭಸ್ಮ ಮತ್ತು ಅಸ್ಥಿಯನ್ನು ಮಡಿಕೆಯಲ್ಲಿ ಸಂಗ್ರಹಿಸಿ ಅದನ್ನು ವಿಶೇಷ ವಿಮಾನದ ಮೂಲಕ ಪತಿ ಬೋನಿ ಕಪೂರ್‌ ಮತ್ತು ಇತರ ಕುಟುಂಬ ಸದಸ್ಯರು ರಾಮೇಶ್ವರಕ್ಕೆ ತಂದಿದ್ದಾರೆ.

ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಚಿತಾಭಸ್ಮವನ್ನು ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಫೆ.28ರಂದು ಶ್ರೀದೇವಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.

ಹಿಂದು ಸಂಪ್ರದಾಯದ ಪ್ರಕಾರ ದೇಹದ ಅಂತ್ಯಸಂಸ್ಕಾರ ನಡೆಸಿದ ಬಳಿಕ ಅಸ್ಥಿ ವಿಸರ್ಜನೆ ಮಾಡುವುದು ಮಹತ್ವದ್ದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ರಾಜ್ಯದ ತಾಪಮಾನ 12°Cಗೆ ಕುಸಿತ-ಕರುನಾಡಿಗೆ ಶೀತ ಕಂಟಕ ಖಚಿತ-ಬೆಂಗಳೂರು ಜನತೆಗೆ ಮೈನಡುಕ ಉಚಿತ!