ಬಾಬರೀ ಮಸೀದಿ ಧ್ವಂಸ: ವಿಚಾರಣೆಗೆ ಹಾಜರಾಗುವಂತೆ ಅಡ್ವಾಣಿ, ಉಮಾ, ಜೋಶಿಗೆ ಕೋರ್ಟ್ ಸೂಚನೆ

Published : May 25, 2017, 03:52 PM ISTUpdated : Apr 11, 2018, 12:45 PM IST
ಬಾಬರೀ ಮಸೀದಿ ಧ್ವಂಸ: ವಿಚಾರಣೆಗೆ ಹಾಜರಾಗುವಂತೆ ಅಡ್ವಾಣಿ, ಉಮಾ, ಜೋಶಿಗೆ ಕೋರ್ಟ್ ಸೂಚನೆ

ಸಾರಾಂಶ

ಸುಪ್ರೀಂಕೋರ್ಟ್‌ ನಿರ್ದೇಶಾ​ನು​ಸಾರ ಸಿಬಿಐ ನ್ಯಾಯಾಲಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಮೇ 20ರಿಂದ ದಿನನಿತ್ಯ ವಿಚಾರಣೆ ನಡೆ​ಸುತ್ತಿದೆ. ರಾಯ್‌ಬರೇಲಿ​ಯಲ್ಲಿದ್ದ ಪ್ರತ್ಯೇ​ಕ ಪ್ರಕರಣವನ್ನು ಲಖನೌ ಸಿಬಿಐ ನ್ಯಾಯಾಲಯಕ್ಕೇ ವರ್ಗಾಯಿಸಿ ನಿತ್ಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಏ.19ರಂದು ಆದೇಶಿಸಿತ್ತು.

ಲಖನೌ: 1992ರಲ್ಲಿ ಸಂಭವಿಸಿದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳಾಗಿರುವ ಎಲ್‌.ಕೆ. ಅಡ್ವಾಣಿ, ಕೇಂದ್ರ ಸಚಿವೆ ಉಮಾ ಭಾರತಿ ಹಾಗೂ ಮುರಳಿ ಮನೋಹರ್ ಜೋಷಿಗೆ ಮೇ.30ರಂದು ವಿಚಾರಣೆಗೆ ಹಾಜರಾಗುವಂತೆ ವಿಶೇಷ ಸಿಬಿಐ ನ್ಯಾಯಾ​ಲಯ ಸೂಚಿಸಿದೆ.

ಸುಪ್ರೀಂಕೋರ್ಟ್‌ ನಿರ್ದೇಶಾ​ನು​ಸಾರ ಸಿಬಿಐ ನ್ಯಾಯಾಲಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಮೇ 20ರಿಂದ ದಿನನಿತ್ಯ ವಿಚಾರಣೆ ನಡೆ​ಸುತ್ತಿದೆ. ರಾಯ್‌ಬರೇಲಿ​ಯಲ್ಲಿದ್ದ ಪ್ರತ್ಯೇ​ಕ ಪ್ರಕರಣವನ್ನು ಲಖನೌ ಸಿಬಿಐ ನ್ಯಾಯಾಲಯಕ್ಕೇ ವರ್ಗಾಯಿಸಿ ನಿತ್ಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಏ.19ರಂದು ಆದೇಶಿಸಿತ್ತು.

ಅಡ್ವಾಣಿ ಅಲ್ಲದೆ, ಉಮಾಭಾರತಿ, ಮುರಳಿ ಮನೋಹರ ಜೋಶಿ, ಸೇರಿದಂತೆ ಅನೇಕ ಬಿಜೆಪಿ ಹಾಗೂ ಬಲಪಂಥೀಯ ಮುಖಂಡರು ಪ್ರಕರಣದ ಆರೋಪಿಗಳಾಗಿದ್ದಾರೆ. ಈಗ ರಾಜಸ್ಥಾನದ ರಾಜ್ಯಪಾಲರಾಗಿರುವ ಕಲ್ಯಾಣ್ ಸಿಂಗ್ ಕೂಡಾ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವರಿಗೆ ಸಾಂವಿಧಾನಿಕ ರಕ್ಷಣೆ ಇದೆ.  ಆ ಹುದ್ದೆಯನ್ನು ಬಿಟ್ಟ ಬಳಿಕ ಅವರು ವಿಚಾರಣೆಗೊಳಬೇಕಾಗುತ್ತದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿಮ್ಮ ಗ್ಯಾಸ್ ಗೀಸರ್ ಸುರಕ್ಷಿತವಾಗಿದೆಯೇ? ಈ ವಿಷಯ ತಿಳ್ಕೊಳ್ಳಿ, ದೊಡ್ಡ ಅನಾಹುತ ತಪ್ಪಿಸಿ!
ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಸಲೀಂ ಮೇಲೆ ಅನುಮಾನ