
ಬೆಂಗಳೂರು : ಮುಂದಿನ ಹಂತದ ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ನಡೆಯಲಿದೆಯೇ? ಇಂತಹದೊಂದು ಸಾಧ್ಯತೆ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ನಡೆದಿದೆ. ಇದಕ್ಕೆ ಕಾರಣ ಉಭಯ ಪಕ್ಷಗಳಿಂದಲೂ ವಿಧಾನ ಪರಿಷತ್ತಿನಿಂದ ಏಕ ಮಾತ್ರ ಸದಸ್ಯೆ ಸಚಿವೆಯಾಗಿರುವುದು. ಹೌದು, ಜಯಮಾಲಾ ಅವರು ಸಚಿವರಾಗಿರುವ ಏಕೈಕ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ವಿಧಾನಮಂಡಲ ಅಧಿವೇಶನ ನಡೆದರೆ ಅವರೇ ಸಭಾನಾಯಕರಾಗ ಬೇಕಾಗುತ್ತದೆ. ಪ್ರಬಲ ಬಿಜೆಪಿ ಪ್ರತಿ ಪಕ್ಷವಾಗಿರುವ ವಿಧಾನ ಪರಿಷತ್ತಿನಲ್ಲಿ ಜಯಮಾಲ ಅವರನ್ನು ಸಭಾನಾಯಕರನ್ನಾಗಿಸಿದರೆ ಸಮರ್ಥವಾಗಿ ಅದನ್ನು ಎದುರಿಸಬಲ್ಲರೇ ಎಂಬ ಬಗ್ಗೆ ಕಾಂಗ್ರೆಸ್ಸಿಗರಿಗೆ ಸಂಶಯವಿದೆ.
ಹೀಗಾಗಿಯೇ ಪರಿಷತ್ತಿನಿಂದ ಮತ್ತೊಬ್ಬರು (ಅವರು ಜೆಡಿಎಸ್ ಅಥವಾ ಕಾಂಗ್ರೆಸ್ ಪೈಕಿ ಒಬ್ಬರಾಗಿ ರಬಹುದು) ಶೀಘ್ರ ಕುಮಾರಸ್ವಾಮಿ ಸಂಪುಟ ಸೇರಬೇಕಾಗಿ ಬರಬಹುದು. ಅದು ಮುಂದಿನ ಬಜೆಟ್ ಅಧಿವೇಶನದ ಒಳಗೆ ನಡೆಯಬೇಕಾಗುತ್ತದೆ ಎನ್ನುತ್ತವೆ ಮೂಲಗಳು.
ಪ್ರಸ್ತುತ ಜೆಡಿಎಸ್ನಲ್ಲಿ ಒಂದು ಸ್ಥಾನ ಮಾತ್ರ ಖಾಲಿಯಿದ್ದು, ಸಂಪುಟ ಸೇರುವುದಾದರೆ ಎಂ.ಎ.ಫಾರೂಕ್ ಅವರಿಗೆ ಹೆಚ್ಚಿನ ಅವಕಾಶವಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಬಸವರಾಜ ಹೊರಟ್ಟಿ ಅವರು ಸಭಾ ಪತಿಯಾಗಲು ಒಪ್ಪದ ಪಕ್ಷದಲ್ಲಿ ಅವರನ್ನು ಜೆಡಿಎಸ್ ವರಿಷ್ಠರು ಸಚಿವ ಸ್ಥಾನಕ್ಕೆ ಪರಿಗಣಿಸಬಹುದು. ಹೀಗಾದಲ್ಲಿ ಫಾರೂಕ್ ಅಥವಾ ಹೊರಟ್ಟಿ ಪೈಕಿ ಒಬ್ಬರು ಸಭಾನಾಯಕರಾದರೆ, ಕಾಂಗ್ರೆಸ್ನಿಂದ ಶೀಘ್ರ ಸಂಪು ಟಕ್ಕೆ ಸಚಿವರನ್ನು ಸೇರ್ಪಡೆ ಮಾಡುವ ಅನಿವಾ ರ್ಯತೆ ಇರುವುದಿಲ್ಲ. ಆದರೆ, ಖಾಲಿಯಿರುವ ಒಂದು ಸ್ಥಾನ ವನ್ನು ತುಂಬಲು ಜೆಡಿಎಸ್ ಹಿಂಜರಿದರೆ ಆಗ ಕಾಂಗ್ರೆಸ್ ಅನಿವಾರ್ಯವಾಗಿ ಪರಿಷತ್ತಿನಿಂದ ಒಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಬೇಕಾಗುತ್ತದೆ.
ಈಗಾಗಲೇ, ಎಸ್.ಆರ್. ಪಾಟೀಲ್, ಉಗ್ರಪ್ಪ, ಎಚ್.ಎಂ. ರೇವಣ್ಣ, ರಘು ಆಚಾರ್ ಸೇರಿದಂತೆ ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಒಬ್ಬರಿಗೆ ಅವಕಾಶ ದೊರೆಯಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.