
ಬೆಂಗಳೂರು(ಜು.31): ಡಿಐಜಿ ರೂಪ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಡಿಜಿಪಿ ಸತ್ಯನಾರಾಯಣ ರಾವ್ ಸಿದ್ಧತೆ ನಡೆಸಿದ್ದಾರೆ.
ತಮ್ಮ ಮೇಲೆ ಮಾಡಿರುವ ಆರೋಪಗಳಿಗೆ ತಾವು ನೀಡಿರುವ ನೋಟಿಸ್ಗೆ ರೂಪ ಅವರು ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಕ್ರಿಮಿನಲ್ ಕೇಸ್ ಹಾಕಲು ಸಂಪೂರ್ಣ ದಾಖಲೆಗಳ ಸಂಗ್ರಹಿಸಲಾಗುತ್ತಿದೆ' ಎಂದು ವಕೀಲ ಪುತ್ತಿಗೆ ರಮೇಶ್ ತಿಳಿಸಿದ್ದಾರೆ.
ರೂಪಾ ವರದಿಯ ವಿಚಾರದಲ್ಲಿ ಇಲಾಖೆ ನಿಯಮ ಪಾಲಿಸಿಲ್ಲ. ಈ ಮೂಲಕ ಸತ್ಯನಾರಾಯಣರಾವ್ ಅವರ ಚಾರಿತ್ರ್ಯಾ ವಧೆ ಮಾಡಲಾಗಿದೆ. ಇದಕ್ಕಾಗಿ ಸತ್ಯನಾರಾಯಣ ರಾವ್ ಅವರ ಕ್ಷಮೆ ಕೇಳಲು ನೊಟೀಸ್ ಕೊಡಲಾಗಿತ್ತು. ಆದರೆ ಯಾವುದೇ ಕ್ಷಮೆ ಕೇಳಿರಲಿಲ್ಲ. ಈ ಕಾರಣದಿಂದ ರೂಪಾ ವಿರುದ್ಧ ಸಿವಿಲ್,ಕ್ರಿಮಿನಲ್ ಮತ್ತು ಮನಿ ಲ್ಯಾಂಡ್ರಿಂಗ್ ಕಾಯಿದೆ ಮೇಲೆ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಸುವರ್ಣನ್ಯೂಸ್ಗೆ ಡಿಜಿಪಿ ಸತ್ಯನಾರಾಯಣ ರಾವ್ ಪರ ವಕೀಲ ಪುತ್ತಿಗೆ ರಮೇಶ್ ತಿಳಿಸಿದ್ದಾರೆ.
ಸತ್ಯನಾರಾಯಣ ರಾವ್ ಅವರು ತಮ್ಮ ಸ್ವಂತ ಹಣದಿಂದ ಪ್ರಕರಣ ದಾಖಲಿಸಬೇಕಿದೆ. 50 ಕೋಟಿ ರೂ. ಸಿವಿಲ್ ಕೇಸ್ ಹಾಕಲು 50 ಲಕ್ಷ ರೂ. ತನಕ ಕೋರ್ಟ್ ಖರ್ಚುಗುತ್ತದೆ. ಸತ್ಯನಾರಾಯಣ್ ರಾವ್ ಅವರು ಹಣ ಹೊಂದಿಸಿಕೊಳ್ಳಬೇಕಿದೆ. ಸತ್ಯನಾರಾಯಣ್ ರಾವ್ ಹೇಳಿದ ತಕ್ಷಣ ಮಾನನಷ್ಟ ಮೊಕದ್ದಮೆಗೆ ನಿರ್ಧರಿಸಲಾಗುವುದು ಎಂದು ವಕೀಲರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.