ಲೋಕಾಯುಕ್ತ ಅಧಿಕಾರಿ ಪುತ್ರನ ಅಪಹರಣಕ್ಕೆ ಯತ್ನ

Published : Jun 13, 2019, 09:27 AM IST
ಲೋಕಾಯುಕ್ತ ಅಧಿಕಾರಿ ಪುತ್ರನ ಅಪಹರಣಕ್ಕೆ ಯತ್ನ

ಸಾರಾಂಶ

ಲೋಕಾಯುಕ್ತದ ವಿಶೇಷ ತನಿಖಾ ತಂಡದ ಡಿಎಸ್ಪಿ ಎಂ.ಅನಿಲಕುಮಾರ್‌ ಪುತ್ರ ಸಾಹಿಲ್‌ ರಾವ್‌ ಅವರನ್ನು ಅಪಹರಿಸುವ ಪ್ರಯತ್ನ ಮಂಗಳವಾರ ಬಳ್ಳಾರಿಯಲ್ಲಿ ನಡೆದಿದೆ. 

ಬಳ್ಳಾರಿ: ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದ ಡಿಎಸ್ಪಿ ಎಂ.ಅನಿಲಕುಮಾರ್‌ ಪುತ್ರ ಸಾಹಿಲ್‌ ರಾವ್‌ ಅವರನ್ನು ಅಪಹರಿಸುವ ಪ್ರಯತ್ನ ಮಂಗಳವಾರ ಸಂಜೆ ನಡೆದಿದೆ. 

ನಂದಿ ಇಂಟನ್ಯಾಷನಲ್‌ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಸಾಹಿಲ್‌ ರಾವ್‌ ನಗರದ ಚಂದ್ರ ಕಾಲನಿ ಮುಖ್ಯರಸ್ತೆಯಲ್ಲಿ ಶಾಲೆಯ ಬಸ್‌ನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುವಾಗ ಹಿಂಬಾಲಿಸಿದ ಇಬ್ಬರು ಅಪರಿಚಿತರು ಆತನ ಹೆಸರು, ವಿಳಾಸ ಕೇಳಿದ್ದರು. ಮಗ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಸ್ಥಳದಿಂದ ಪರಾರಿಯಾದರು ಎಂದು ಅನಿಲಕುಮಾರ ಅವರು ಕೌಲ್‌ ಬಜಾರ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. 

ಅಕ್ರಮ ಗಣಿಗಾರಿಕೆಯ ಕುರಿತ ದೂರುಗಳ ತನಿಖೆಯು ಅಂತಿಮ ಹಂತದಲ್ಲಿರುವಾಗಲೇ, ತಮ್ಮ ಮನೆಯ ಸುತ್ತಮುತ್ತ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದಾರೆ. ನನ್ನ ಮಗನನ್ನು ಅಪಹರಿಸಿ, ತೊಂದರೆ ನೀಡಲು ಯತ್ನಿಸಿದ್ದಾರೆ. ಹೀಗಾಗಿ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್