ಸಿದ್ದಗಂಗಾ ಶ್ರೀಗಳ ಪಾದ ಮುಟ್ಟಲು ಹಿಂದೇಟು ಹಾಕುತ್ತಿದ್ದವರು ಈಗ ತಡಕಾಡುತ್ತಿದ್ದಾರೆ

Published : Jan 30, 2018, 06:37 PM ISTUpdated : Apr 11, 2018, 12:44 PM IST
ಸಿದ್ದಗಂಗಾ ಶ್ರೀಗಳ ಪಾದ ಮುಟ್ಟಲು ಹಿಂದೇಟು ಹಾಕುತ್ತಿದ್ದವರು ಈಗ ತಡಕಾಡುತ್ತಿದ್ದಾರೆ

ಸಾರಾಂಶ

ಈ ಡೋಂಗಿಗಳು ಹಿಂದೂಗಳ ಕಾಲು ಹಿಡಿಯಲು ಹೋರಾಟಿದ್ದಾರೆ. ಯಾವ ದೇವಸ್ಥಾನವನ್ನೂ ಬಿಡುತ್ತಿಲ್ಲ

ತುಮಕೂರು(ಜ.30): ಒಂದಾನೊಂದು ಕಾಲದಲ್ಲಿ ಸಿದ್ದಗಂಗಾ ಶ್ರೀಗಳ ಪಾದ ಮುಟ್ಟಲೂ ಹಿಂದೇಟು ಹಾಕುತಿದ್ದವರು ಈಗ ಶ್ರೀಗಳ ಪಾದ ಎಲ್ಲಿದೆ ಎಂದು ತಡಕಾಡುತಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಸೊಗಡು ಶಿವಣ್ಣ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯಗೆ ಈಗ ಹಿಂದೂಗಳ ಶಕ್ತಿ ಗೊತ್ತಾಗಿದೆ. ಹಾಗಾಗಿ ಈ ಡೋಂಗಿಗಳು ಹಿಂದೂಗಳ ಕಾಲು ಹಿಡಿಯಲು ಹೋರಾಟಿದ್ದಾರೆ. ಯಾವ ದೇವಸ್ಥಾನವನ್ನೂ ಬಿಡುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ. ಸಿದ್ದಗಂಗಾ ಶ್ರೀಗಳ ಶಕ್ತಿ ಹೇಗೆ ಇವರಿಗೆ ತಿಳಿದಿದೆಯೋ ಹಾಗೆನೆ ಬಿಜೆಪಿ ಹಿಂದೂಪರ ಇರವ ಶಕ್ತಿ ಗೊತ್ತಾಗಿದೆ. ಹಾಗಾಗಿ ನಾಟಕವಾಡುತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯನ್ನು ಸಮರ್ಥಿಸಿಕೊಂಡ ಸೊಗಡು ಶಿವಣ್ಣ, ಅನಂತಕುಮಾರ್ ಹೆಗಡೆ ಹಿರಿಯ ರಾಜಕಾರಣಿ, ಐದು ಬಾರಿ ಸಂಸದರಾದವರು. ಅವರಿಗೆ ಈ ಹಿಂದೆಯೇ ಸ್ಥಾನ ಮಾನ ಸಿಗಬೇಕಿತ್ತು. ಈಗ ಕುರ್ಚಿ ಸಿಕ್ಕಿದೆ ಹಾಗಾಗಿ ಅವರ ಸಾಮರ್ಥ್ಯ ಗೊತ್ತಾಗಿದೆ. ಈ ಕಾರಣದಿಂದಲೇ ಅವರಿಗೆ ತಾರಾ ಪ್ರಚಾರಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಬಿಜೆಪಿ ಪಕ್ಷದ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಯಾವ ಅಸಮಾಧಾನವೂ ಇಲ್ಲ. ಬುದ್ದಿ ಜೀವಿಗಳು ಎನಿಸಿಕೊಂಡವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಗ್ರಾಮ ನೆನೆದರೆ ಸಾಕು ಮಕ್ಕಳು ಹುಟ್ಟಾತ್ತಾರೆ, 1500 ಜನಸಂಖ್ಯೆಯ ಇಲ್ಲಿ 3 ತಿಂಗಳ ಜನನ 27,000
ತುಂಗಭದ್ರಾ ಜಲಾಶಯದ ಕ್ರಸ್ಟ್‌ಡ್ ಗೇಟ್‌ ಅಳವಡಿಕೆ ಹಿನ್ನೆಲೆ, 6 ತಿಂಗಳು ಕಾಲುವೆಗಳಿಗೆ ನೀರು ಸ್ಥಗಿತ!