ನಿರ್ಮಾಪಕ ಹಾಗೂ ಸಹ ನಿರ್ಮಾಪಕನ ಗಲಾಟೆಗೆ ಟೆಕ್ಕಿ ಬಲಿ : ಇದು ಕನ್ನಡ ಸಿನಿಮಾ ಒಂದರ ಗಲಾಟೆ

Published : Mar 04, 2017, 09:36 AM ISTUpdated : Apr 11, 2018, 12:46 PM IST
ನಿರ್ಮಾಪಕ ಹಾಗೂ ಸಹ ನಿರ್ಮಾಪಕನ ಗಲಾಟೆಗೆ ಟೆಕ್ಕಿ ಬಲಿ : ಇದು ಕನ್ನಡ ಸಿನಿಮಾ ಒಂದರ ಗಲಾಟೆ

ಸಾರಾಂಶ

ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುವ ಸ್ವರೂಪ್‌, ಕಳೆದ ವರ್ಷ ‘ಡೇಂಜರ್‌ ಝೋನ್‌' ಎಂಬ ಕನ್ನಡ ಚಲನಚಿತ್ರ ನಿರ್ಮಿಸಿದ್ದರು. ಈ ಚಿತ್ರಕ್ಕೆ ಅವರ ಗೆಳೆಯ ರಾಮು ಸಹ ಹಣ ಹೂಡಿದ್ದರು. ಆದರೆ, ಚಿತ್ರ ತೆರೆಕಂಡಷ್ಟೆ ವೇಗವಾಗಿ ಚಿತ್ರಮಂದಿರಗಳಿಂದ ಎತ್ತಂಗಡಿ'ಯಾಗಿತ್ತು. ಸಿನಿಮಾದ ಸೋಲಿನಿಂದ ಬೇಸರಗೊಂಡ ರಾಮು, ತಾನು ಹೂಡಿದ್ದ ಹಣ ಮರಳಿಸುವಂತೆ ನಿರ್ಮಾಪಕನನನ್ನು ಆಗ್ರಹಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಸ್ವರೂಪ, ಯಾವುದೇ ಕಾರಣಕ್ಕೂ ಬಿಡಿಗಾಸು ಸಹ ಹಿಂದಿ ರುಗಿಸುವುದಿಲ್ಲ ಎಂದಿದ್ದರು. ಈ ಹಣಕಾಸು ವಿಷಯ ವಾಗಿ ಹಲವು ಬಾರಿ ಅವರ ನಡುವೆ ಗಲಾಟೆಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು(ಮಾ.04): 

ಕನ್ನಡ

ಚಲನಚಿತ್ರವೊಂದರ ಹಣಕಾಸು ವಿಚಾರವಾಗಿ ಚಿತ್ರದ ನಿರ್ಮಾಪಕ ಹಾಗೂ ಸಹ ನಿರ್ಮಾಪಕನ ನಡುವಿನ ಕಾದಾಟದಲ್ಲಿ ಸಾಫ್ಟ್ವೇರ್ಕಂಪನಿ ನೌಕರರೊಬ್ಬರು ಬಲಿಯಾಗಿದ್ದಾರೆ. 

ಇತ್ತೀಚಿಗೆ

ತೆರೆಕಂಡಡೇಂಜರ್ಝೋನ್‌' ಚಲನ ಚಿತ್ರಕ್ಕೆ ಸಂಬಂಧಿಸಿದಂತೆ ಘರ್ಷಣೆಯಾಗಿದ್ದು, ಸಾಫ್ಟ್ವೇರ್ಕಂಪನಿ ನೌಕರ ಮನೋಜ್ಮ್ಯಾಥ್ಯು (32) ಹತ್ಯೆಗೀಡಾಗಿದ್ದಾರೆ.

ಮಹಾಲಕ್ಷ್ಮಿ

ಲೇಔಟ್ ಎಪಿಎಂಸಿ ಯಾರ್ಡ್ನಲ್ಲಿ ಗುರುವಾರ ತಡರಾತ್ರಿ ನಿರ್ಮಾಪಕ ಸ್ವರೂಪ್ಗೌಡ ಹಾಗೂ ಸಹ ನಿರ್ಮಾಪಕ ರಾಮು ತಂಡದ ನಡುವೆ ನಡೆದ ಗಲಾಟೆಯಲ್ಲಿ ಮಾಥ್ಯು ಹತ್ಯೆಯಾಗಿದೆ. ಗಲಾಟೆ ಯಲ್ಲಿ ಗಾಯಗೊಂಡಿರುವ ಸ್ವರೂಪ್ಗೌಡ, ಗೋಪಿ ಹಾಗೂ ಕಮಲ್ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದು, ಅವರು ಪ್ರಾಣಾಪಾಯದಿಂದ ಸುರಕ್ಷಿತವಾಗಿ ದ್ದಾರೆ. ಹತ್ಯೆ ಬಳಿಕ ತಲೆಮರೆಸಿಕೊಂಡಿರುವ ಸಹ ನಿರ್ಮಾಪಕ ರಾಮು ಮತ್ತು ಆತನ ನಾಲ್ವರು ಸಹಚರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

ರಿಯಲ್

ಎಸ್ಟೇಟ್ವ್ಯವಹಾರ ನಡೆಸುವ ಸ್ವರೂಪ್‌, ಕಳೆದ ವರ್ಷಡೇಂಜರ್ಝೋನ್‌' ಎಂಬ ಕನ್ನಡ ಚಲನಚಿತ್ರ ನಿರ್ಮಿಸಿದ್ದರು. ಚಿತ್ರಕ್ಕೆ ಅವರ ಗೆಳೆಯ ರಾಮು ಸಹ ಹಣ ಹೂಡಿದ್ದರು. ಆದರೆ, ಚಿತ್ರ ತೆರೆಕಂಡಷ್ಟೆ ವೇಗವಾಗಿ ಚಿತ್ರಮಂದಿರಗಳಿಂದ ಎತ್ತಂಗಡಿ'ಯಾಗಿತ್ತು. ಸಿನಿಮಾದ ಸೋಲಿನಿಂದ ಬೇಸರಗೊಂಡ ರಾಮು, ತಾನು ಹೂಡಿದ್ದ ಹಣ ಮರಳಿಸುವಂತೆ ನಿರ್ಮಾಪಕನನನ್ನು ಆಗ್ರಹಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಸ್ವರೂಪ, ಯಾವುದೇ ಕಾರಣಕ್ಕೂ ಬಿಡಿಗಾಸು ಸಹ ಹಿಂದಿ ರುಗಿಸುವುದಿಲ್ಲ ಎಂದಿದ್ದರು. ಹಣಕಾಸು ವಿಷಯ ವಾಗಿ ಹಲವು ಬಾರಿ ಅವರ ನಡುವೆ ಗಲಾಟೆಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಾರ್ಟಿಗೆ

ವಿಲನ್ಎಂಟ್ರಿ: ಸ್ವರೂಪ್‌, ತನ್ನ ಗೆಳೆಯರಾದ ಮನೋಜ್‌, ಗೋಪಿ ಹಾಗೂ ಕಮಲ್ಜತೆ ರಾತ್ರಿ ಎಪಿಎಂಸಿ ಯಾರ್ಡ್ಬಳಿ ಪಾರ್ಟಿ ಮಾಡುತ್ತಿದ್ದರು. ವಿಚಾರ ತಿಳಿದ ರಾಮು, ಅಲ್ಲಿಗೆ 12 ಗಂಟೆ ಸುಮಾರಿಗೆ ತನ್ನ ಸಹಚರರ ಜತೆ ತೆರಳಿದ್ದ. ವೇಳೆ ಎರಡು ಗುಂಪುಗಳ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಗ ಕೆರಳಿದ ರಾಮು ಹಾಗೂ ಆತನ ಸಹಚರರು, ಮಾರಕಾಸ್ತ್ರಗಳಿಂದ ದಾಳಿಗಿಳಿದಿದ್ದಾರೆ. ವೇಳೆ ಮನೋಜ್ಗೆ ಎದೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದ ಆರೋಪಿಗಳು, ಸ್ವರೂಪ್ಹಾಗೂ ಆತನ ಇಬ್ಬರು ಗೆಳೆಯರ ಮೇಲೂ ಮಚ್ಚು-ಲಾಂಗುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಚೀರಾಟ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು, ಗಾಯಾಳುಗಳನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ ತೀವ್ರ ರಕ್ತಸ್ರಾವದಿಂದ ಮ್ಯಾಥ್ಯು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಮ್ಯಾಥ್ಯುಅವರು, ಮೊದಲು ಸ್ವರೂಪ್ಅವರ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದರು. ಇತ್ತೀಚಿಗೆ ಸಾಫ್ಟ್ವೇರ್ಕಂಪನಿಯಲ್ಲಿ ವೈಬ್ಡಿಸೈನರ್ಆಗಿ ಕೆಲಸಕ್ಕೆ ಸೇರಿದ್ದರು. ಘಟನೆ ಸಂಬಂಧ ಮಹಾಲಕ್ಷ್ಮಿ ಲೇಔಟ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?