ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿದ್ಧಗಂಗಾ ಶ್ರೀಗಳ ದರ್ಶನ

Published : Dec 24, 2018, 12:09 PM IST
ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿದ್ಧಗಂಗಾ ಶ್ರೀಗಳ ದರ್ಶನ

ಸಾರಾಂಶ

ಶತಾ​ಯುಷಿ ಡಾ. ಶಿವ​ಕು​ಮಾರ ಸ್ವಾಮೀಜಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲ​ಕ ಮಾತನಾಡಿ ಅಚ್ಚರಿ ಮೂಡಿ​ಸಿ​ದರು. ಪ್ರತಿವರ್ಷ ನಡೆ​ಯುವ ಹಳೆ ವಿದ್ಯಾ​ರ್ಥಿ​ಗಳ ಹಾಗೂ ಹಿತೈ​ಷಿ​ಗಳ ಸಂಘದ ಸಭೆಯ ಅಧ್ಯ​ಕ್ಷ​ತೆ​ಯ​ನ್ನು ಸಿದ್ಧಗಂಗಾ ಶ್ರೀಗಳೇ ವಹಿಸಿದ್ದರು. 

ತುಮ​ಕೂರು :  ತುಮ​ಕೂ​ರಿನ ಸಿದ್ಧಗಂಗಾ ಮಠದಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಭಾನುವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ 64ನೇ ಮಹಾಧಿವೇಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶತಾ​ಯುಷಿ ಡಾ. ಶಿವ​ಕು​ಮಾರ ಸ್ವಾಮೀಜಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲ​ಕ ಮಾತನಾಡಿ ಅಚ್ಚರಿ ಮೂಡಿ​ಸಿ​ದರು.

ಪ್ರತಿವರ್ಷ ನಡೆ​ಯುವ ಹಳೆ ವಿದ್ಯಾ​ರ್ಥಿ​ಗಳ ಹಾಗೂ ಹಿತೈ​ಷಿ​ಗಳ ಸಂಘದ ಸಭೆಯ ಅಧ್ಯ​ಕ್ಷ​ತೆ​ಯ​ನ್ನು ಸಿದ್ಧಗಂಗಾ ಶ್ರೀಗಳೇ ವಹಿಸಿದ್ದರು. ಶಸ್ತ್ರಚಿಕಿ​ತ್ಸೆಗೆ ಒಳ​ಗಾ​ಗಿರುವ ಕಾರಣ ಶ್ರೀಗಳು ಸಭೆಗೆ ಬರಲು ಸಾಧ್ಯ​ವಾ​ಗ​ಲಿಲ್ಲ. ಆದರೆ, ತಾವು ವಿಶ್ರಾಂತಿ ತೆಗೆ​ದು​ಕೊ​ಳ್ಳು​ತ್ತಿ​ರುವ ಹಳೆ ಮಠ​ದಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿದ್ಯಾ​ರ್ಥಿ​ಗ​ಳಿಗೆ ಶುಭ ಹಾರೈಸಿದರು.

ಸುಮಾರು 1 ನಿಮಿ​ಷ​ ಮಾತ​ನಾ​ಡಿದ ಶ್ರೀಗಳು ವಚ​ನ​ವೊಂದನ್ನು ಉಲ್ಲೇಖಿಸಿ ಮಾತು ಮುಗಿ​ಸಿ​ದರು. ವಿಡಿಯೋ ಪರದೆ ಮೇಲೆ ಶ್ರೀಗಳು ಕಾಣಿಸಿಕೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳ ಸಂಭ್ರಮ ಹೇಳತೀರದಾಗಿತ್ತು. ಕರತಾಡನ ಮಾಡಿ, ಸಂತಸ ವ್ಯಕ್ತಪಡಿಸಿದರು.

ಆರೋಗ್ಯ ಚೇತ​ರಿಕೆ:  ಈ ಮಧ್ಯೆ ಶ್ರೀಗಳು ಚೆನ್ನೈ​ನ ರೆಲಾ ಆಸ್ಪ​ತ್ರೆ​ಯಿಂದ ಡಿಸ್ಚಾಜ್‌ರ್‍ ಆಗಿ 5 ದಿವ​ಸ ಕಳೆ​ದಿದ್ದು, ಅವರ ಆರೋ​ಗ್ಯ​ದಲ್ಲಿ ಮತ್ತಷ್ಟುಚೇತ​ರಿಕೆ ಕಂಡು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಲಬುರಗಿ: ನಡುರಸ್ತೆಯಲ್ಲಿ ಕುಡುಗೋಲಿನಿಂದ ಪತ್ನಿಯ ಕತ್ತು ಕತ್ತರಿಸಿ, ಹೆಣದ ಮೇಲೆ ಕಾರು ಹರಿಸಿ ಪತಿಯ ಅಟ್ಟಹಾಸ!
ಬೆಂಗಳೂರಿನಲ್ಲಿ ಭೀಕರ ಜೋಡಿ ಕೊಲೆ: ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನಿಗೆ ಚಾಕು ಇರಿದು ಕೊಂದ ಬಾಲಕ!