ಮೋದಿ ಒಬ್ಬ ಹೇಡಿಯೆಂದು ನಾನು ಹೇಳಿದಕ್ಕೆ ಅವರ ಬೆಂಬಲಿಗರು ಇಂದು ನನ್ನ ಮೇಲೆ ಶೂ ಎಸೆದಿದ್ದಾರೆ. ಮೋದಿಜಿಯವರೇ, ನಾವು ಕೂಡಾ ಆ ರೀತಿ ಮಾಡಬಹುದು, ಆದರೆ ನಮ್ಮ ಸಂಸ್ಕಾರ ಅದಕ್ಕೆ ಅನುಮತಿಸುವುದಿಲ್ಲ. ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ರೊಹ್ತಕ್ (ಜ.01): ಸಾರ್ವಜನಿಕ ಸಭೆಯೊಂದನ್ನುದ್ದೇಶಿ ಮಾತನಾಡುತ್ತಿದ್ದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ಯುವಕನೋರ್ವ ಶೂ ಎಸೆದ ಘಟನೆ ನಡೆದಿದೆ.
ಆದರೆ ಎಸೆದ ಶೂ ಕೇಜ್ರಿವಾಲ್'ವರೆಗೆ ತಲುಪದೆ ವೇದಿಕೆ ಮೇಲೆ ಬಿದ್ದಿದೆ.
ಘಟನೆಗೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಶೂ ಎಸೆತಕ್ಕೆ ಪ್ರಧಾನಿ ನರೇಂಧ್ರ ಮೋದಿಯವರನ್ನು ಹೊಣೆಗಾರರನ್ನಾಗಿಸಿದ್ದಾರೆ.
मैंने कहा था मोदीजी कायर हैं। आज अपने चमचों से जूता फिंकवाया।मोदीजी, हम भी ये कर सकते हैं पर हमारे संस्कार/तहज़ीब हमें इजाज़त नहीं देते(1/2)
— Arvind Kejriwal (@ArvindKejriwal) January 1, 2017आप चाहे जूता फिंकवाओ या CBI रेड कराओ, नोटबंदी घोटाले और सहारा बिरला रिश्वतख़ोरी का सच मैं बताता रहूँगा(2/2)
— Arvind Kejriwal (@ArvindKejriwal) January 1, 2017
ಮೋದಿ ಒಬ್ಬ ಹೇಡಿಯೆಂದು ನಾನು ಹೇಳಿದಕ್ಕೆ ಅವರ ಬೆಂಬಲಿಗರು ಇಂದು ನನ್ನ ಮೇಲೆ ಶೂ ಎಸೆದಿದ್ದಾರೆ. ಮೋದಿಜಿಯವರೇ, ನಾವು ಕೂಡಾ ಆ ರೀತಿ ಮಾಡಬಹುದು, ಆದರೆ ನಮ್ಮ ಸಂಸ್ಕಾರ ಅದಕ್ಕೆ ಅನುಮತಿಸುವುದಿಲ್ಲ. ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಸಿಬಿಐ ದಾಳಿ ಅಥವಾ ಶೂ ಎಸೆತದ ಹೊರತಾಗಿಯೂ ನಾನು ನೋಟು ಅಮಾನ್ಯ ಕ್ರಮ ಹಾಗೂ ಸಹಾರಾ-ಬಿರ್ಲಾ ಹಗರಣಗಳನ್ನು ಬಯಲಿಗೆಳೆಯುತ್ತೇನೆ, ಎಂದು ಅವರು ಹೇಳಿದ್ದಾರೆ.