ಜ.20ರಿಂದ ಶಿರಾಡಿಘಾಟ್’ನಲ್ಲಿ 4 ತಿಂಗಳು ಸಂಚಾರ ಬಂದ್

Published : Jan 07, 2018, 12:15 PM ISTUpdated : Apr 11, 2018, 01:08 PM IST
ಜ.20ರಿಂದ ಶಿರಾಡಿಘಾಟ್’ನಲ್ಲಿ  4 ತಿಂಗಳು ಸಂಚಾರ ಬಂದ್

ಸಾರಾಂಶ

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ಎರಡನೇ ಹಂತದ ರಸ್ತೆ ಕಾಂಕ್ರಿಟೀಕರಣ ಕೆಲಸ ಆರಂಭಿಸುವ ಹಿನ್ನೆಲೆಯಲ್ಲಿ ಜ.20ರಿಂದ ಈ ಮಾರ್ಗದಲ್ಲಿ ಎಲ್ಲಾ ಬಗೆಯ ವಾಹನ ಸಂಚಾರ ನಿರ್ಬಂಧಿಸಲು ನಿರ್ಧರಿಸಲಾಗಿದೆ.

ಸಕಲೇಶಪುರ (ಜ.07): ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ಎರಡನೇ ಹಂತದ ರಸ್ತೆ ಕಾಂಕ್ರಿಟೀಕರಣ ಕೆಲಸ ಆರಂಭಿಸುವ ಹಿನ್ನೆಲೆಯಲ್ಲಿ ಜ.20ರಿಂದ ಈ ಮಾರ್ಗದಲ್ಲಿ ಎಲ್ಲಾ ಬಗೆಯ ವಾಹನ ಸಂಚಾರ ನಿರ್ಬಂಧಿಸಲು ನಿರ್ಧರಿಸಲಾಗಿದೆ.

ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ಅವರು ಪಟ್ಟಣದಲ್ಲಿ ಶನಿವಾರ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯ ಅಧಿಕಾರಿಗಳು ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಮೇ ಅಂತ್ಯದೊಳಗೆ ಕಾಮಗಾರಿ ಮುಕ್ತಾಯಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು. ಶಿರಾಡಿಘಾಟ್‌ನಲ್ಲಿರುವ 30 ಕಿ.ಮೀ. ರಸ್ತೆ ಪೈಕಿ ಈಗಾಗಲೇ 13 ಕಿ.ಮೀ. ಉದ್ದದ ರಸ್ತೆ ಕಾಮಗಾರಿ 2016ರಲ್ಲೇ ಮುಕ್ತಾಯವಾಗಿದೆ.

6 ಬದಲಿ ಮಾರ್ಗಗಳು ರಾ.ಹೆ. 75ರಲ್ಲಿ ಮಂಗಳೂರಿಂದ ಹಾಸನ-ಬೆಂಗಳೂರು ನಡುವೆ ಸಂಚರಿಸುವ ವಾಹನ ಗಳಿಗೆ 6 ಬದಲಿ ರಸ್ತೆಗಳನ್ನು ಸೂಚಿಸಲಾಗಿದೆ.

ಮಂಗಳೂರಿನಿಂದ ಚಾರ್ಮುಡಿಘಾಟ್, ಅಲ್ಲಿಂದ ಮೂಡಿಗೆರೆ ಮಾರ್ಗ ಹಾಸನ

ಮಂಗಳೂರು- ಮೂಡಿಗೆರೆ- ಜನ್ನಾಪುರ -ಹಾನುಬಾಳ್ ಮಾರ್ಗ  ಸಕಲೇಶಪುರ

ಮಂಗಳೂರು- ಮಾಣಿ- ಮಡಿಕೇರಿ- ಹುಣಸೂರು- ಕೆ.ಆರ್ ನಗರ- ಹಾಸನ

ಮಂಗಳೂರು- ಮಡಿಕೇರಿ- ಇಲವಾಲ- ಬೆಂಗಳೂರು

ಉಡುಪಿ- ಕುದುರೆಮುಖ- ಕೊಟ್ಟಿಗೆಹಾರ- ಹಾಸನ- ಬೆಂಗಳೂರು

ಉಡುಪಿ- ಹೊಸ ಅಂಗಡಿ- ಮಾಸ್ತಿಕಟ್ಟೆ- ಹೊಸನಗರ- ಆಯನೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 20 ಲಕ್ಷ ಅಕ್ರಮ ವಲಸಿಗರು? ಪೊಲೀಸರ ಲೆಕ್ಕದಲ್ಲಿ ಕೇವಲ 485 ಮಂದಿ!
india Latest News Live: ನ್ಯಾಷನಲ್‌ ಹೆರಾಲ್ಡ್ ಕೇಸು: ಹೈಕೋರ್ಟ್‌ ಮೊರೆ ಹೋದ ಜಾರಿ ನಿರ್ದೇಶನಾಲಯ