ಕಾವೇರಿ ವಿಚಾರದಲ್ಲಿ ರಾಷ್ಟ್ರೀಯ ಬಿಜೆಪಿಯ ನಿಲುವನ್ನ ಬಹಿರಂಗಪಡಿಸಿದರಾ ಶೈನಾ?

Published : Sep 22, 2016, 10:47 AM ISTUpdated : Apr 11, 2018, 12:40 PM IST
ಕಾವೇರಿ ವಿಚಾರದಲ್ಲಿ ರಾಷ್ಟ್ರೀಯ ಬಿಜೆಪಿಯ ನಿಲುವನ್ನ ಬಹಿರಂಗಪಡಿಸಿದರಾ ಶೈನಾ?

ಸಾರಾಂಶ

ಕಾವೇರಿ ವಿಚಾರದಲ್ಲಿ ರಾಷ್ಟ್ರೀಯ ಬಿಜೆಪಿಯ ನಿಲುವನ್ನ ಬಹಿರಂಗಪಡಿಸಿದರಾ ಶೈನಾ?

ನವದೆಹಲಿ(ಸೆ.22): ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಪ್ರಧಾನಮಂತ್ರಿ ನರೇಂದ್ರಮೋದಿ ಮುಂದಾಗುತ್ತಿಲ್ಲ. ಇತ್ತ ರಾಜ್ಯ ನಾಯಕರೂ ಸಹ ಪ್ರಧಾನಿ ಮಧ್ಯಸ್ಥಿಕೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಮಧ್ಯಸ್ಥಿಕೆ ವಹಿಸುವುದಿರಲಿ ಕಾವೇರಿ ವಿಚಾರದ ಬಗ್ಗೆ ತುಟಿ ಬಿಚ್ಚಲೂ ಮೋದಿ ಸಿದ್ಧರಿಲ್ಲ. ಇತ್ತ, ಜನ ಎಷ್ಟೇ ಗೋಗರೆದರೂ ಬಿಜೆಪಿಯ ಸಂಸದರು ಒತ್ತಡ ಹೇರಿ ಪ್ರಧಾನಿಗಳ ಗಮನ ಸೆಳೆಯಲು ಸಿದ್ಧರಿಲ್ಲ. ಸಿಎಂ ಕರೆದಿದ್ದ ಸರ್ವಪಕ್ಷ ಸಭೆಗೂ ಹಾಜರಾಗದೇ ಬಿಜೆಪಿ ನಾಯಕರು ನಿರ್ಲಕ್ಷ್ಯ ವಹಿಸಿದ್ದು ಜನರ ಆಕ್ರೋಶಕ್ಕೂ ತುತ್ತಾಗಿದೆ.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಇತ್ತ ಬಿಜೆಪಿಯ ವಕ್ತಾರೆಯೊಬ್ಬರು ನೀಡಿರುವ ಹೇಳಿಕೆ ಭಾರೀ ಸಂಶಯಕ್ಕೆ ಎಡೆಮಾಡಿದೆ. ತಮಿಳುನಾಡಿಗೆ ನೀರು ಬಿಡಬೇಕೆಂಬುದು ರಾಷ್ಟ್ರ ಬಿಜೆಪಿಯ ನಿಲುವಾ..? ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಹೌದು, ಬಿಜೆಪಿಯ ರಾಷ್ಟ್ರೀಯ ವಕ್ತಾರೆ ಎನ್.ಸಿ. ಶೈನಾ, ` ಕರ್ನಾಟಕ ತಮಿಳುನಾಡಿಗೆ ನೀರು ಬಿಡಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಆದೇಶ ನೀಡಿದೆ.. ಸ್ವಾರ್ಥವನ್ನ ಬಿಟ್ಟು ನೀರು ಬಿಡಬೇಕು, ಭಾರತ ದೇಶ ಒಂದು ಎಂಬುವುದನ್ನ ಮನಗಾಣಬೇಕು' ಎಂದು ಹೇಳಿದ್ದಾರೆ.

ಕೃಪೆ: NDTV

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೆಲ್ಫಿ& ಶೇಕ್‌ಹ್ಯಾಂಡ್‌ಗೆ 10 ಲಕ್ಷ : ಇಂಡಿಯಾ ಟೂರ್ ಮಾಡಿದ ಮೆಸ್ಸಿಗೆ ಆಯೋಜಕರು ಕೊಟ್ಟಿದ್ದು ಎಷ್ಟು ಕೋಟಿ
ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ