ತಾಯೊಯೊಂದಿಗೆ ಹಿರಿಯ ಪತ್ರಕರ್ತನ ಹತ್ಯೆ :ತಿಂಗಳಲ್ಲಿ ಗೌರಿ ಸೇರಿದಂತೆ ಇದು ಮೂರನೇ ಕೊಲೆ

Published : Sep 23, 2017, 05:06 PM ISTUpdated : Apr 11, 2018, 12:53 PM IST
ತಾಯೊಯೊಂದಿಗೆ ಹಿರಿಯ ಪತ್ರಕರ್ತನ ಹತ್ಯೆ :ತಿಂಗಳಲ್ಲಿ ಗೌರಿ ಸೇರಿದಂತೆ ಇದು ಮೂರನೇ ಕೊಲೆ

ಸಾರಾಂಶ

ಕೇವಲ ಒಂದು ತಿಂಗಳ ಅವಧಿಯಲ್ಲಿ ದೇಶದಲ್ಲಿ ಮೂವರ ಪತ್ರಕರ್ತರ ಹತ್ಯೆಯಾಗಿದೆ.

ಮೊಹಾಲಿ(ಸೆ.23): ಚಾಕುವಿನಿಂದ ಗಂಟಲು ಸೀಳಿ ಹಿರಿಯ ಪತ್ರಕರ್ತ ಹಾಗೂ ಆತನ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಪಂಜಾಬಿನಲ್ಲಿ ನಡೆದಿದೆ.

ಮೊಹಾಲಿಯ ಅಪಾರ್ಟ್'ಮೆಂಟ್'ನಲ್ಲಿ ಪತ್ರಕರ್ತ ಕೆಜೆ ಸಿಂಗ್(60) ಹಾಗೂ ಇವರ ತಾಯಿ ಗುರುಚರಣ್ ಕೌರ್(92) ಅವರನ್ನು ಕೊಲೆ ಮಾಡಲಾಗಿದೆ. ಕೆಜೆ ಸಿಂಗ್ ಅವರು ಚಂಢೀಘಡದಲ್ಲಿ  ಇಂಡಿಯನ್ ಎಕ್ಸ್'ಪ್ರೆಸ್, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಆಂಗ್ಲ ದೈನಿಕಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಕೊಲೆಯಾಗಿರುವುದನ್ನು ಮೊಹಾಲಿಯ ಎಸ್'ಪಿ ಕುಲ್'ದೀಪ್ ಚಹಾಲ್ ದೃಢಪಡಿಸಿದ್ದು ತನಿಖೆಯನ್ನು ಆರಂಭಿಸಿದ್ದಾರೆ.

ಹತ್ಯೆಯ ನಂತರ ಸಿಂಗ್ ಅವರ ಫೋರ್ಡ್ ಐಕಾನ್ ಕಾರು ಕಾಣೆಯಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ದೇಶದಲ್ಲಿ ಮೂವರ ಪತ್ರಕರ್ತರ ಹತ್ಯೆಯಾಗಿದೆ. ಸೆ.4 ರಂದು ಕನ್ನಡ ವಾರಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. 2 ದಿನಗಳ ಹಿಂದೆ ತ್ರಿಪುರದಲ್ಲಿ ಪ್ರತಿಭಟನೆಯನ್ನು ಚಿತ್ರೀಕರಿಸುತ್ತಿದ್ದ ಸ್ಥಳೀಯ ಟೀವಿ ಚಾನಲ್ ವರದಿಗಾರ ಶಾಂತನು ಬೌಮಿಕ್ ಎಂ ಹತ್ಯೆ ಮಾಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ