
ಚೆನ್ನೈ: ಗುಜರಾತ್ ದಲಿತ ಮುಖಂಡ ಹಾಗೂ ಶಾಸಕ ಜಿಗ್ನೇಶ್ ಮೇವಾನಿ ಅವರ ಸುದ್ದಿಗೋಷ್ಠಿಯನ್ನು ಚೆನ್ನೈನ ಪತ್ರಕರ್ತರು ಬಹಿಷ್ಕರಿಸಿದ ಘಟನೆ ಇಂದು ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಮೇವಾನಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದರು. ಆದರೆ, ಆಂಗ್ಲ ಸುದ್ದಿವಾಹಿನಿಯೊಂದರ ಪ್ರತಿನಿಧಿಗೆ ಹೊರಹೋಗುವಂತೆ ಮೇವಾನಿ ಸೂಚಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಆ ಸುದ್ದಿವಾಹಿನಿಯ ಪ್ರತಿನಿಧಿಯ ಉಪಸ್ಥಿತಿಯಲ್ಲಿ ತಾನು ಮಾತನಾಡುವುದಿಲ್ಲ, ಇದು ನನ್ನ ನೀತಿ, ಎಂದು ಮೇವಾನಿ ಹೇಳಿದ್ದಾರೆ.
ಆದರೆ ಚೆನ್ನೈ ಪತ್ರಕರ್ತರಿಗೆ ಮೇವಾನಿ ಪ್ರತಿಕ್ರಿಯೆ ಇರುಸುಮುರುಸು ಉಂಟುಮಾಡಿದೆ. ‘ನೀವು ಈ ರೀತಿ ಆಗ್ರಹಿಸುವಂತಿಲ್ಲ, ಮಾತನಾಡದೇ ಇರುವುದು ನಿಮಗೆ ಬಿಟ್ಟ ವಿಚಾರ ಎಂದು’ ಪತ್ರಕರ್ತರು ಗೋಷ್ಠಿಯನ್ನು ಬಹಿಷ್ಕರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.