
ಚೆನ್ನೈ(ಆ.17): ಖ್ಯಾತ ನಟ ರಜನೀಕಾಂತ್ರ ಪತ್ನಿ ಲತಾ ರಜನೀಕಾಂತ್ ನಡೆಸುವ ರಾಘವೇಂದ್ರ ಪ್ರತಿಷ್ಠಾನದ ಅನುದಾನದಲ್ಲಿ ನಡೆಸಲಾಗುವ ಆಶ್ರಮ ಮೆಟ್ರಿಕ್ಯುಲೇಶನ್ ಶಾಲೆ ಬಾಡಿಗೆ ಪಾವತಿಸಲಾಗದೆ ಮುಚ್ಚಲ್ಪಟ್ಟಿದೆ. ಗುಂಡಿ ಎಂಬಲ್ಲಿರುವ ಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳಿದ್ದು, ಅವರನ್ನು ಪಕ್ಕದ ವೆಲಚೇರಿಯಲ್ಲಿ ಇರುವ ಇದೇ ಸಂಸ್ಥೆಯ ಐಸಿಎಸ್ಇ ಶಾಲೆಗೆ ವರ್ಗಾಯಿಸಲಾಗಿದೆ. 2002ರಲ್ಲಿ ಖಾಸಗಿ ಜಾಗವನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗಿತ್ತು. ಈ ಬಾಡಿಗೆ ಹಣ 10 ಕೋಟಿ ರು. ದಾಟಿತ್ತು. ಆದರೆ ಲತಾ ಅವರ ಟ್ರಸ್ಟ್ ಕೇವಲ 2 ಕೋಟಿ ರು. ನೀಡುವುದಾಗಿ ಹೇಳುತ್ತಿದೆ.
ಕಟ್ಟಡದ ಸೇವಾ ತೆರಿಗೆ ಪ್ರತಿ ತಿಂಗಳಿಗೆ 60 ಸಾವಿರ ರು. ಬರುತ್ತಿದ್ದು, ಅದನ್ನು ಪಾವತಿಸಲು ಕಷ್ಟವಾಗುತ್ತಿದೆ. ಹೀಗಾಗಿ ಶಾಲಾ ಗೇಟ್ಗೆ ಬೀಗ ಹಾಕಲು ನಿರ್ಧರಿಸಬೇಕಾಯಿತು ಎಂದು ಶಾಲಾ ಆವರಣದ ಮಾಲೀಕ ವೆಂಕಟೇಶ್ವರಲು ಹೇಳಿದ್ದಾರೆ. ಆದರೆ ಆರೋಪಗಳನ್ನು ನಿರಾಕರಿಸಿರುವ ಲತಾ ರಜನೀಕಾಂತ್, ಶಾಲಾ ಕಟ್ಟಡ ಮಾಲೀಕರು ದೌರ್ಜನ್ಯ ಎಸಗುತ್ತಿದ್ದಾರೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.