ಅನಂತಪದ್ಮನಾಭ ದೇಗುಲದ ‘ಬಿ’ ಕೋಣೆ ಶೀಘ್ರ ತೆರವು: ಇಲ್ಲಿದೆ ಲಕ್ಷ ಕೋಟಿ ರೂ. ವಜ್ರಾಭರಣ

By Suvarna Web DeskFirst Published Jul 6, 2017, 8:48 PM IST
Highlights

ಮಂಗಳವಾರ ವಿಚಾರಣೆ ವೇಳೆ ‘ಬಿ’ ಕೊಠಡಿಯನ್ನು ತೆರೆಯಬೇಕು ಎಂಬ ಅಮಿಕಸ್ ಕ್ಯುರಿ ಗೋಪಾಲ್ ಸುಬ್ರಮಣಿಯಂ ಬೇಡಿಕೆಯ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯ ನ್ಯಾಯಾಧೀಶ ನ್ಯಾ| ಜೆ.ಎಸ್. ಖೇಹರ್ ಹಾಗೂ ನ್ಯಾ| ಡಿ.ವೈ. ಚಂದ್ರಚೂಡ ಅವರ ಪೀಠ ತಿಳಿಸಿದೆ. ಬಿ ಕೊಠಡಿ ತೆರೆದರೆ ಅನಾಹುತ ಸಂಭವಿಸಲಿದೆ ಎಂಬ ನಂಬಿಕೆ ಇರುವ ಕಾರಣ ಅದನ್ನು ಇನ್ನೂ ತರೆದಿಲ್ಲ.

ನವದೆಹಲಿ(ಜು.06): ಲಕ್ಷ ಕೋಟಿ ರು. ಮೌಲ್ಯದ ಬೆಳ್ಳಿ, ಚಿನ್ನ, ವಜ್ರದ ಆಭರಣಗಳು ಇದೆ ಎನ್ನಲಾದ ಕೇರಳದ ತಿರುವನಂತಪುರದ ಅನಂತಪದ್ಮನಾಭ ಸ್ವಾಮಿ ದೇವಾಲಯದ ಆಡಳಿತದ ಮೇಲೆ ನಿಗಾ ಇಡಲು ಇನ್ನು ತನಗೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜೊತೆಗೆ ಅಪಾರ ಸಂಪತ್ತು ಇದೆ ಎಂದು ಹೇಳಲಾದ ದೇಗುಲದ ನೆಲಮಾಳಿಗೆಯಲ್ಲಿರುವ ‘ಬಿ’ ರಹಸ್ಯ ಕೊಠಡಿ ತೆರೆಯುವುದನ್ನು ತಾನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಮಂಗಳವಾರ ವಿಚಾರಣೆ ವೇಳೆ ‘ಬಿ’ ಕೊಠಡಿಯನ್ನು ತೆರೆಯಬೇಕು ಎಂಬ ಅಮಿಕಸ್ ಕ್ಯುರಿ ಗೋಪಾಲ್ ಸುಬ್ರಮಣಿಯಂ ಬೇಡಿಕೆಯ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯ ನ್ಯಾಯಾಧೀಶ ನ್ಯಾ| ಜೆ.ಎಸ್. ಖೇಹರ್ ಹಾಗೂ ನ್ಯಾ| ಡಿ.ವೈ. ಚಂದ್ರಚೂಡ ಅವರ ಪೀಠ ತಿಳಿಸಿದೆ. ಬಿ ಕೊಠಡಿ ತೆರೆದರೆ ಅನಾಹುತ ಸಂಭವಿಸಲಿದೆ ಎಂಬ ನಂಬಿಕೆ ಇರುವ ಕಾರಣ ಅದನ್ನು ಇನ್ನೂ ತರೆದಿಲ್ಲ.

ದೇಗುಲದಲ್ಲಿ ಕಳವು ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆಯನ್ನು ಕಲ್ಪಿಸಿಬೇಕು. ದೇಗುಲಕ್ಕೆ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಆಡಳಿತ ಮಂಡಳಿ ರಚಿಸಬೇಕು. ದೇಗುಲದ ದೈನಂದಿನ ವಹಿವಾಟುಗಳನ್ನು ನೋಡಿಕೊಳ್ಳಲು ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಬೇಕು. ಹಣಕಾಸು ವ್ಯವಸ್ಥೆ ನೋಡಿಕೊಳ್ಳಲು ಹಣಕಾಸು ನಿಯಂತ್ರಕರನ್ನು ನೇಮಕ ಮಾಡಬೇಕೆಂದು ಸರಣಿ ಆದೇಶಗಳನ್ನು ನೀಡಿದೆ. ಪ್ರಸಕ್ತ ದೇಗುಲಕ್ಕೆ ನಿತ್ಯ 200 ಪೊಲೀಸರ ಭದ್ರತೆ ದಿನದ 24 ತಾಸೂ ಇರುತ್ತದೆ.

 

click me!