ಎಟಿಎಂನಲ್ಲಿ ಖೋಟಾ ನೋಟು ಸಾಧ್ಯವಿಲ್ಲ: ಎಸ್'ಬಿಐ

Published : Feb 22, 2017, 04:51 PM ISTUpdated : Apr 11, 2018, 12:55 PM IST
ಎಟಿಎಂನಲ್ಲಿ ಖೋಟಾ ನೋಟು ಸಾಧ್ಯವಿಲ್ಲ: ಎಸ್'ಬಿಐ

ಸಾರಾಂಶ

ಖೋಟಾ ನೋಟು ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗಿದೆಯೇ ಹೊರತು, ಗ್ರಾಹಕ ಬ್ಯಾಂಕನ್ನು ಸಂಪರ್ಕಿಸಿಲ್ಲವೆಂದು ಬ್ಯಾಂಕ್ ಹೇಳಿದೆ. ಈ ಕೃತ್ಯದ ಹಿಂದೆ ಕಿಡಿಗೇಡಿಗಳ ಕೈವಾಡವಿರಬಹುದು ಎಂಬ ಶಂಕೆಯನ್ನು ಬ್ಯಾಂಕ್ ವ್ಯಕ್ತಪಡಿಸಿದೆ.

ನವದೆಹಲಿ(ಫೆ.22): ದೆಹಲಿಯ ಎಟಿಎಂ ಯಂತ್ರದಲ್ಲಿ ಖೋಟಾನೋಟು ಬಂದಿದೆಯೆಂಬ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುವುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಹೇಳಿದೆ.

ಬ್ಯಾಂಕ್’ಗೆ ಬರುವ ಹಾಗೂ ಬ್ಯಾಂಕಿನಿಂದ ನೀಡಲ್ಪಡುವ ಪ್ರತಿಯೊಂದು ನೋಟುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅತ್ಯಾಧುನಿಕ ವ್ಯವಸ್ಥೆ ಇದೆ. ಆದುದರಿಂದ ಎಟಿಎಂ ಯಂತ್ರದಲ್ಲಿ ಖೋಟಾ ನೋಟು ಬರುವ ಪ್ರಶ್ನೆಯೇ ಉದ್ಭವಿಸುವುದಿಲ್ಲವೆಂದು ಎಸ್’ಬಿಐ ಹೇಳಿದೆ.

ಖೋಟಾ ನೋಟು ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗಿದೆಯೇ ಹೊರತು, ಗ್ರಾಹಕ ಬ್ಯಾಂಕನ್ನು ಸಂಪರ್ಕಿಸಿಲ್ಲವೆಂದು ಬ್ಯಾಂಕ್ ಹೇಳಿದೆ. ಈ ಕೃತ್ಯದ ಹಿಂದೆ ಕಿಡಿಗೇಡಿಗಳ ಕೈವಾಡವಿರಬಹುದು ಎಂಬ ಶಂಕೆಯನ್ನು ಬ್ಯಾಂಕ್ ವ್ಯಕ್ತಪಡಿಸಿದೆ.

ದೆಹಲಿಯ ಸಂಗಮ್ ವಿಹಾರ್’ನಲ್ಲಿರುವ ಎಸ್’ಬಿಐ ಎಟಿಎಂವೊಂದರಲ್ಲಿ ಗ್ರಾಹಕನಿಗೆ 2000 ರೂ.ನ ನಕಲಿ ನೋಟುಗಳು ಬಂದಿದ್ದು, ಪೊಲೀಸರ ಪರಿಶೀಲನೆಯಲ್ಲಿ ಖಾತ್ರಿಪಟ್ಟಿದೆಯೆಂದು ವರದಿಯಾಗಿದೆ. ಪೊಲೀಸರು ಎಟಿಎಮ್’ಅನ್ನು ತಮ್ ವಶಕ್ಕೆ ಪಡೆದಿದ್ದು ಸಿಸಿಟಿವಿ ದೃಶ್ಯಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ನೋಟುಗಳನ್ನು ಯಾರೋ ಕಿಡಿಗೇಡಿಗಳು ಮುದ್ರಿಸಿದ್ದು, ಅದರ ಮೇಲೆ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಎಂಬುದರ ಬದಲು ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಮುದ್ರಿಸಲಾಗಿದೆ. ಅಲ್ಲದೆ, ‘ಗ್ಯಾರಂಟೀಡ್ ಬೈ ಇಂಡಿಯನ್ ಗವರ್ನ್‌ಮೆಂಟ್’ ಎಂಬುದರ ಬದಲು ‘ಗ್ಯಾರಂಟೀಡ್ ಬೈ ಚಿಲ್ಡ್ರನ್ಸ್ ಗವರ್ನ್‌ಮೆಂಟ್’ ಎಂದೂ ಬರೆಯಲಾಗಿದೆ. ಅಲ್ಲದೆ, ಮೂಲ ನೋಟಿನಲ್ಲಿರುವ ಅಂಶಗಳೂ, ಇದರಲ್ಲಿರುವ ಅಂಶಗಳೂ ಸಾಕಷ್ಟು ವ್ಯತ್ಯಾಸ ಇರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದ್ವೇಷ ಭಾಷಣ ಕಾಯ್ದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅತಿದೊಡ್ಡ ಬೆದರಿಕೆ: ಪಿ.ರಾಜೀವ್ ಲೇಖನ
ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ತಡೆಯಲು ದ್ವೇಷ ಭಾಷಣ ಕಾಯ್ದೆ ಅಗತ್ಯ: ರಮೇಶ್ ಬಾಬು ಲೇಖನ