ಹಾರಿ ಬಂತು ಮತ್ತೊಂದು ಬಾಂಬ್: ಸತೀಶ್ ಸಾಹುಕಾರ್ ಏನಂದ್ರು?

Published : Sep 16, 2018, 04:40 PM ISTUpdated : Sep 19, 2018, 09:27 AM IST
ಹಾರಿ ಬಂತು ಮತ್ತೊಂದು ಬಾಂಬ್: ಸತೀಶ್ ಸಾಹುಕಾರ್ ಏನಂದ್ರು?

ಸಾರಾಂಶ

ನಾವಂತೂ ಸರ್ಕಾರ ಬೀಳ್ಸಲ್ಲ, ಅದೇ ಬಿದ್ದರೆ ಗೊತ್ತಿಲ್ಲ! ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆ! ರಮೇಶ್, ಡಿಕೆಶಿ ವೈಮನಸ್ಸು ನಂಗೊತ್ತಿಲ್ಲ! ರಮೇಶ್ ಎಸ್ಕಾರ್ಟ್ ಬಿಟ್ಟು ಎಲ್ಲೋಗ್ತಾರೆ ಅನ್ನೋದೂ ಗೊತ್ತಿಲ್ಲ

ಬೆಳಗಾವಿ(ಸೆ.16): ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಮತ್ತೊಂದು ಹೊಸ ಬಾಂಬ್ ಹಾಕಿದ್ದು, ಸರ್ಕಾರ ಪತನವಾದರೂ ನಾವು ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸರ್ಕಾರ ಪತನವಾದರೂ ಆಗಬಹುದು ಎಂಬ ಸೂಚನೆ ನೀಡಿದ್ದಾರೆ.

ಸಹೋದರ ರಮೇಶ್ ಜಾರಕಿಹೊಳಿ ಮತ್ತು ಸಚಿವ ಡಿಕೆಶಿ ನಡುವಿನ ವೈಮನಸ್ಸು ಕುರಿತು ಪ್ರಶ್ನಿಸಿದಾಗ, ಅವರಿಒಬ್ಬರೂ ಕಳೆದ ೨೦ ವರ್ಷಗಳಿಂದ ಒಂದೇ ಗರಡಿ ಮನೆಯಲ್ಲಿ ಕುಸ್ತಿ ಆಡಿದವರು ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಬೆಳಗಾವಿಗೆ ಬೇರೆ ನಾಯಕರು ಎಂಟ್ರಿಯಾಗಬಾರದು ಎಂಬುದು ನಮ್ಮ ಬೇಡಿಕೆಯಾಗಿತ್ತು. ಅದರಂತೆ ನಮ್ಮ ಬೇಡಿಕೆ ಈಡೇರಿದ್ದು, ಯಾವುದೇ ಕಾರಣಕ್ಕೂ ಜಾರಕಿಗೊಳಿ ಸಹೋದರರು ಪಕ್ಷ ವಿರೋಧಿ ಚಟುವಟಿಕೆ ನಡೆಸುವುದಿಲ್ಲ ಎಂದು ಭರವಸೆ ನೀಡಿದರು.

ಇದೇ ವೇಳೆ ಎಸ್ಕಾರ್ಟ್  ಬಿಟ್ಟು ರಹಸ್ಯ ಸ್ಥಳಗಳಿಗೆ ತೆರಳುತ್ತಿರುವ ರಮೇಶ್ ಜಾರಕಿಹೊಳಿ ಕುರಿತು ಪ್ರಶ್ನಿಸಿದಾಗ ಈ ಕುರಿತು ಅವರಿಗೇ ಕೇಳುವುದು ಒಳಿತು ಎಂದು ಸತೀಶ್ ಹೇಳಿದರು. ಕಾಂಗ್ರೆಸ್ ನಿಂದ ಈ ಹಿಂದೆಯೂ ಹಲವು ಶಾಸಕರು ಬಿಜೆಪಿಗೆ ಹೋಗಿದ್ದು, ಈ ಬಾರಿಯೂ ಹೋದರೆ ಅಚ್ಚರಿಪಟಡಬೇಕಿಲ್ಲ ಎಂದು ಸತೀಶ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉತ್ತರಕನ್ನಡ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮರು ಎಸ್ಕೇಪ್!
ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು