
ಬೆಂಗಳೂರು (ಫೆ.19): ಪರಪ್ಪನ ಅಗ್ರಹಾರದಲ್ಲಿ ಭದ್ರತೆ ನೆಪವೊಡ್ಡಿ ತಮಿಳುನಾಡು ಜೈಲಿಗೆ ಹೋಗಲು ಶಶಿಕಲಾ ಯೋಜನೆ ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಚೆನ್ನೈ ಜೈಲಿನಲ್ಲಿ ವಿರಾಜಮಾನವಾಗಿ ಕುಳಿತು ಶಶಿಕಲಾಗೆ ಹಿಂಬಾಗಿಲಿನಿಂದ ರಾಜ್ಯ ಆಳಲು ಸುಲಭವಾಗುವಂತೆ ಬೆಂಗಳೂರಿನಿಂದ ಚೆನ್ನೈ ಜೈಲಿಗೆ ವರ್ಗಾವಣೆ ಮಾಡಿ ಎಂದು ಕೋರ್ಟ್'ಗೆ ಮನವಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಭಾಷಾ ದ್ವೇಷ ಮತ್ತು ನೀರಿನ ವಿಚಾರಗಳಲ್ಲಿ ಎರಡೂ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯವಿರುವುದರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಶಶಿಕಲಾ ನಟರಾಜನ್ಗೆ ಸೇಫ್ ಅಲ್ವಂತೆ!
ಹೀಗಾಗಿ ಚೆನ್ನೈ ಜೈಲಿಗೆ ಹೋಗಲು ನಾಳೆ ಕೋರ್ಟ್'ಗೆ ಶಶಿಕಲಾ ನಾಳೆ ಮನವಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.