
ಅದ್ಧೂರಿಯಾಗಿ ಸೆಟ್ಟೇರಿದ ‘ಕುರುಕ್ಷೇತ್ರ’ ಚಿತ್ರದಲ್ಲಿ ಭೀಮಸೇನ ಪಾತ್ರ ವನ್ನು ಮಾಡಿಸಬೇಕೆಂದು ನಿರ್ದೇಶಕ ಮತ್ತು ನಿರ್ಮಾಪಕರು ಆಸೆ ಪಟ್ಟಿದ್ದು ಖಳನಟ ಅನಿಲ್ ಅವರಿಂದ. ದುರಾ ದೃಷ್ಟವಶಾತ್ ಅನಿಲ್ ಅವರು ‘ಮಾಸ್ತಿಗುಡಿ’ ಚಿತ್ರದ ಶೂಟಿಂಗ್ ವೇಳೆ ಅಸ್ತಂಗತರಾದರು. ಹಾಗಾಗಿ ಅವರ ಬದಲಿಗೆ ಇದೀಗ ದಾನಿಶ್ ಅಖ್ತರ್ ಸೈಫಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎನ್ನಲಾಗಿದೆ. ಮೂಲತಃ ಮುಂಬೈಯವರಾದ ದಾನಿಶ್ ಹಿಂದಿಯ ಸಿಯಾ ಕಿ ರಾಮ್ ಧಾರಾವಾಹಿಯಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುವ ಮೂಲಕ ಖ್ಯಾತರಾಗಿದ್ದರು. ಅವರ ದೇಹದಾರ್ಢ್ಯತೆ ಭೀಮನ ಪಾತ್ರಕ್ಕೆ ಸರಿ ಹೊಂದುತ್ತದೆ ಎಂಬ ಕಾರಣಕ್ಕೆ ಕೊನೆಗೆ ದಾನಿಶ್ ಅವರನ್ನು ತಂಡ ಆಯ್ಕೆ ಮಾಡಿತು
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.