ಗಾಲಿ ಜನಾರ್ದನ ರೆಡ್ಡಿ ಮಗಳ ಅದ್ಧೂರಿ ಮದುವೆ: ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ RTI ಕಾರ್ಯಕರ್ತ

Published : Nov 15, 2016, 06:32 AM ISTUpdated : Apr 11, 2018, 12:44 PM IST
ಗಾಲಿ ಜನಾರ್ದನ ರೆಡ್ಡಿ ಮಗಳ ಅದ್ಧೂರಿ ಮದುವೆ: ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ RTI ಕಾರ್ಯಕರ್ತ

ಸಾರಾಂಶ

ಆದಾಯ ತೆರಿಗೆ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ ನರಸಿಂಹಮೂರ್ತಿ ತೆರಿಗೆ ವಂಚಿಸಿ ಜನಾರ್ದನರೆಡ್ಡಿ ದುಂದು ವೆಚ್ಚದ ಮದುವೆ ಮಾಡುತ್ತಿದ್ದಾರೆ. ಅರಮನೆ ಮೈದಾನದಲ್ಲಿ ಮದುವೆಯನ್ನು ವೈಭವೋಪೆತವಾಗಿ ನಡೆಸಲಾಗುತ್ತಿದೆ, ರೆಡ್ಡಿ ಮಗಳ ಮದುವೆಗೆ ಖರ್ಚಾಗುತ್ತಿರುವ ಹಣದ ಮೂಲ ಯಾವುದು? 40 ತಿಂಗಳು ಜೈಲು ವಾಸ ಅನುಭವಿಸಿದ್ದ ರೆಡ್ಡಿಗೆ ಇಷ್ಟು ಹಣ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು(ನ.15): ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ದುಂದುವೆಚ್ಚ ಮಾಡುತ್ತಿದ್ದಾರೆಂದು ಆರ್'ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ.

ಆದಾಯ ತೆರಿಗೆ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ ನರಸಿಂಹಮೂರ್ತಿ ತೆರಿಗೆ ವಂಚಿಸಿ ಜನಾರ್ದನರೆಡ್ಡಿ ದುಂದು ವೆಚ್ಚದ ಮದುವೆ ಮಾಡುತ್ತಿದ್ದಾರೆ. ಅರಮನೆ ಮೈದಾನದಲ್ಲಿ ಮದುವೆಯನ್ನು ವೈಭವೋಪೆತವಾಗಿ ನಡೆಸಲಾಗುತ್ತಿದೆ, ರೆಡ್ಡಿ ಮಗಳ ಮದುವೆಗೆ ಖರ್ಚಾಗುತ್ತಿರುವ ಹಣದ ಮೂಲ ಯಾವುದು? 40 ತಿಂಗಳು ಜೈಲು ವಾಸ ಅನುಭವಿಸಿದ್ದ ರೆಡ್ಡಿಗೆ ಇಷ್ಟು ಹಣ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ 500, 1000 ಸಾವಿರ ನೋಟು ಚಲಾವಣೆ ರದ್ದುಪಡಿಸಿದೆ. ಈ ಸಂದರ್ಭದಲ್ಲಿ ಜನಾರ್ದನ ರೆಡ್ಡಿ, 600 ಕೋಟಿ ವೆಚ್ಚದಲ್ಲಿ ಮದುವೆ ಮಾಡುತ್ತಿದ್ದಾರೆ. ಇದು ಗೊತ್ತಿದ್ದರೂ ಆದಾಯ ತೆರಿಗೆ ಅಧಿಕಾರಿಗಳು ಮೌನವಹಿಸಿರುವುದೇಕೆ?. ರೆಡ್ಡಿ ಖರ್ಚು ಮಾಡುತ್ತಿರುವ ಹಣ ನೋಡಿಯೂ ಐಟಿ ಯಾಕೆ ದಾಳಿ ನಡೆಸುತ್ತಿಲ್ಲ?. ಈ ವಿಚಾರವಾಗಿ ಆದಾಯ ತೆರಿಗೆ ಅಧಿಕಾರಿಗಳು ಮದುವೆಯ ಖರ್ಚು ವೆಚ್ಚದ ಮಾಹಿತಿಯನ್ನು ಪಡೆಯಬೇಕು ತಮ್ಮ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹವಾಮಾನ ಇಲಾಖೆ ಎಚ್ಚರಿಕೆ, ನಾಲ್ಕು ದಿನ ಭಾರಿ ಚಳಿ, ಈ ರಾಜ್ಯಗಳಲ್ಲಿ ಹಿಮಪಾತ ಸಾಧ್ಯತೆ
ಮೈಸೂರಲ್ಲಿ ಹೆಚ್ಚಾಯ್ತು ಕ್ರಿಮಿನಲ್‌ಗಳ ಉಪಟಳ: ಹಾಡಹಗಲೇ ಗನ್‌ ತೋರಿಸಿ 4 ಕೆಜಿ ಚಿನ್ನ ಲೂಟಿ!